Advertisement

ಚುನಾವಣೆ ಬಳಿಕ ಬರಲಿದೆ ರಡ್ಡ್ ಎಕ್ರೆ ಸಾಂಗ್‌ !

12:30 PM Apr 04, 2019 | pallavi |

ವಿಸ್ಮಯ ವಿನಾಯಕ್‌ ಅವರ ಬಹುನಿರೀಕ್ಷೆಯ ಸಿನೆಮಾ ಈಗಾಗಲೇ ಎಲ್ಲ ಹಂತದ ಶೂಟಿಂಗ್‌ ಪೂರ್ಣಗೊಳಿಸಿ ಕೊನೆಯ ಹಂತದ ಸಿದ್ಧತೆ ನಡೆಸುತ್ತಿದೆ. “ರಡ್ಡ್ ಎಕ್ರೆ’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ಸೌಂಡ್‌ ಮಾಡುತ್ತಿದೆ. ಅಂದಹಾಗೆ, ಈಗಾಗಲೇ ಶೂಟಿಂಗ್‌ ಪೂರ್ಣಗೊಳಿಸಿದ ಸಿನೆಮಾದ ಮೂರು ಹಾಡುಗಳನ್ನು ಚುನಾವಣೆಯ ಬಳಿಕ ಅದ್ಧೂªರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ವಿಸ್ಮಯ ವಿನಾಯಕ್‌ ಹಾಗೂ ಶಶಿರಾಜ್‌ ರಾವ್‌ ಕಾವೂರು ಬರೆದಿರುವ ಹಾಡಿಗೆ ವಿಸ್ಮಯ್‌ ಹಾಗೂ ದೀಪಕ್‌ ಕೋಡಿಕಲ್‌ ಸ್ವರ ನೀಡಲಿದ್ದಾರೆ.

Advertisement

ವಿಭಿನ್ನ ಟೈಟಲ್‌ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ಸದ್ದು ಮಾಡುತ್ತಿರುವ “ರಡ್ಡ್ ಎಕ್ರೆ’ ಸಿನೆಮಾದಲ್ಲಿ ಕೋಸ್ಟಲ್‌ವುಡ್‌ನ‌ ಖ್ಯಾತ ನಟರು ಬಣ್ಣಹಚ್ಚಿದ್ದಾರೆ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಉಮೇಶ್‌ ಮಿಜಾರ್‌, ದೀಪಕ್‌ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಹಲವು ಖ್ಯಾತನಾಮರಿದ್ದಾರೆ.  ವಿಶೇಷವೆಂದರೆ ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ, ದೀಪಕ್‌ ಶೆಟ್ಟಿ, ರೋಶನ್‌ ಶೆಟ್ಟಿ ಈ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ.  ಉಳಿದಂತೆ ಆಗಸ್ಟ್‌ ವೇಳೆಗೆ ರಡ್ಡ್ ಎಕ್ರೆ ಸೇಲ್‌ ಆಗುವುದು ಪಕ್ಕಾ ಎಂಬುದು ಚಿತ್ರತಂಡದ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next