Advertisement

ನೀರಿನಲ್ಲಿ ಮುಳುಗಿ ಆರ್‌ಟಿಐ ಕಾರ್ಯಕರ್ತ ಸಾವು

06:00 AM Mar 25, 2018 | |

ಬಂಟ್ವಾಳ: ಹಸಿರು ಸೇನೆ ಸದಸ್ಯ, ಆರ್‌ಟಿಐ ಕಾರ್ಯಕರ್ತ ಮಾರ್ನಬೈಲು ನಿವಾಸಿ  ಶರತ್‌ ಕುಮಾರ್‌ (48) ಅವರು ಮಾ. 24ರಂದು ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ಸಮೀಪ ನೇತ್ರಾವತಿ ನದಿಯಲ್ಲಿ   ಮುಳುಗಿ ಮೃತಪಟ್ಟಿದ್ದಾರೆ.

Advertisement

ಅವರು ನದಿ ನೀರಿನಲ್ಲಿ ಸ್ನಾನ ಮಾಡಲು ಬಂದಿದ್ದನ್ನು ಕಂಡವರು ಬಳಿಕ ಕಾಣೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಈಜು ಗಾರರು  ಹುಡುಕಾಡಿ ದಾಗ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ, ಪುತ್ರ ನನ್ನು ಅಗಲಿದ್ದಾರೆ.
ಅವರು ತನ್ನ ದ್ವಿಚಕ್ರ ವಾಹನವನ್ನು ದೇವಸ್ಥಾನದ ಮುಂದೆ ನಿಲ್ಲಿಸಿ  ನದಿಯ ಕಡೆಗೆ ಹೋಗಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next