Advertisement

ಆರ್‌ಎಸ್‌ಎಸ್‌ ಶಾಖೆ: ಸರಕಾರಿ ನೌಕರರಿಗೆ ನಿರ್ಬಂಧ ಇಲ್ಲ: ಸಿಎಂ ಚೌಹಾಣ್

11:01 AM Nov 13, 2018 | Team Udayavani |

ಭೋಪಾಲ್‌ : ”ರಾಜ್ಯ ಸರಕಾರದ ಕಚೇರಿಗಳಲ್ಲಿ ಆರ್‌ಎಸ್‌ಎಸ್‌ ಶಾಖೆ ನಡೆಸುವುದನ್ನು ಮುಂದುವರಿಸಲಾಗುವುದು ಮತ್ತು ಅದರಲ್ಲಿ ಪಾಲ್ಗೊಳ್ಳುವುದಕ್ಕೆ ಸರಕಾರಿ ನೌಕರರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ” ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. 

Advertisement

ಮಧ್ಯಪ್ರದೇಶದ ಖರಗೋನ್‌ ನಲ್ಲಿ  ಮಾತನಾಡುತ್ತಿದ್ದ ಚೌಹಾಣ್‌ ಅವರು “ಯಾರೂ ಆರ್‌ಎಸ್‌ಎಸ್‌ ನಿಷೇಧಿಸಲಾರರು” ಎಂದು ಖಡಾಖಂಡಿತವಾಗಿ ಹೇಳಿದರು. 

ಆರ್‌ಎಸ್‌ಎಸ್‌ ಒಂದು ದೇಶಪ್ರೇಮಿಗಳ ಸಂಘಟನೆ.ಅಂತೆಯೇ ಅದರ ಶಾಖೆಗಳಲ್ಲಿ ಪ್ರತಿಯೋರ್ವ ರಾಷ್ಟ್ರವಾದಿ ಮತ್ತು ಸರಕಾರಿ ನೌಕರ ಭಾಗವಹಿಸಬಹುದಾಗಿದೆ. ಕಾಂಗ್ರೆಸ್‌ ಪಕ್ಷ ತನ್ನಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಪೂರ್ವಗ್ರಹ, ದುರಭಿಮಾನ ಹೊಂದಿದೆ’ ಎಂದು ಚೌಹಾಣ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next