Advertisement

ಸೋಮಣ್ಣ, ಅಶೋಕ್‌ ಅವರನ್ನು ಬಲಿ ಕೊಡಲು RSS ಹುನ್ನಾರ: ಎಚ್‌.ವಿಶ್ವನಾಥ್‌

08:04 PM Apr 15, 2023 | Team Udayavani |

ಮೈಸೂರು: ಸಚಿವರಾದ ವಿ.ಸೋಮಣ್ಣ ಹಾಗೂ ಆರ್‌.ಅಶೋಕ್‌ ಅವರನ್ನು ರಾಜಕೀಯವಾಗಿ ಬಲಿ ಕೊಡಲು ಆರ್‌ಎಸ್‌ಎಸ್‌ ಹುನ್ನಾರ ನಡೆಸಿದೆ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಆರೋಪಿಸಿದರು.

Advertisement

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಪ್ರಬಲ ಲಿಂಗಾಯತ ನಾಯಕ ಸೋಮಣ್ಣ ಹಾಗೂ ಒಕ್ಕಲಿಗ ನಾಯಕ  ಅಶೋಕ್‌ ಅವರನ್ನು ಬಿಜೆಪಿ ರಾಜಕೀಯವಾಗಿ ಬಲಿ ಕೊಡುತ್ತಿದೆ. ಬಿಜೆಪಿಗೆ ಲಿಂಗಾಯತ ಶಾಸಕರು ಬೇಕು. ಲಿಂಗಾಯತ  ನಾಯಕ ಬೇಕಿಲ್ಲ, ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸಲು  ಆರ್‌ಎಸ್‌ಎಸ್‌  ಕುತಂತ್ರ ನಡೆಸಿದೆ ಎಂದು ದೂರಿದರು.

ಡಿ.ಕೆ. ಶಿವಕುಮಾರ್‌ ಒಬ್ಬ ಪ್ರಬಲ ನಾಯಕ. ಅವರ ವಿರುದ್ಧ ಅಶೋಕ್‌ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನ ಗಮನಿಸಬೇಕು. ಈ ಚುನಾಣೆಯಲ್ಲಿ ಯಡಿಯೂರಪ್ಪ ಪಾತ್ರ ಏನಿಲ್ಲ.  ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ತನ್ನ ಪ್ರಬಲ ನಾಯಕರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಆದರೆ, ಕಾಂಗ್ರೆಸ್ಸಿನ ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ಏಕೆ ಹೀಗೆ ಪ್ರಬಲ ನಾಯಕರನ್ನು ಬಿಜೆಪಿ ಕಣಕ್ಕೆ ಇಳಿಸಿಲ್ಲ ಎಂದು ವಿಶ್ವನಾಥ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next