Advertisement

ಸಿಎಂ ಪಿಣರಾಯಿ ತಲೆ ತೆಗೆದ್ರೆ 1 ಕೋಟಿ ಇನಾಮು:RSS ಮುಖಂಡನ ಘೋಷಣೆ

03:44 PM Mar 02, 2017 | Team Udayavani |

ಮಧ್ಯಪ್ರದೇಶ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರೂಪಾಯಿ ಇನಾಮು ನೀಡುವುದಾಗಿ ಮಧ್ಯಪ್ರದೇಶದ ಆರ್ ಎಸ್ಎಸ್ ಮುಖಂಡರೊಬ್ಬರು ಗುರುವಾರ ಉಜ್ಜೈನಿಯಲ್ಲಿ ನಡೆದ ಸಮಾರಂಭದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ.

Advertisement

ಕೇರಳ ರಾಜ್ಯದಲ್ಲಿ ಸಂಘ ಪರಿವಾರದ ಸದಸ್ಯರನ್ನು ಹತ್ಯೆಗೈದಿರುವುದಕ್ಕೆ ಕೇರಳ ಸಿಎಂ ಪಿಣರಾಯಿ ಹೊಣೆಗಾರರು. ಹಾಗಾಗಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ತನ್ನ ಆಸ್ತಿಯನ್ನು ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಉಜ್ಜೈನಿಯ ಆರ್ ಎಸ್ಎಸ್ ಪ್ರಮುಖ್ ಡಾ.ಚಂದ್ರಾವತ್ ಬಹಿರಂಗವಾಗಿ ಘೋಷಿಸಿದ್ದಾರೆ.

ಉಜ್ಜೈನಿಯಲ್ಲಿ  ನಡೆದ ಆರ್ ಎಸ್ಎಸ್ ಸಮಾರಂಭದಲ್ಲಿ ಸಂಸದ ಚಿಂತಾಮಣಿ ಮಾಲ್ವಿಯಾ, ಶಾಸಕ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಚಂದ್ರಾವತ್ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next