Advertisement

Dattatreya Hosabale: ಜಾತಿ ತಾರತಮ್ಯ ಅಳಿಸಲು ಮುಂದಾಗಿ

11:01 AM Oct 14, 2023 | Suhan S |

ಗಾಂಧಿನಗರ: ಜಾತಿ ತಾರತಮ್ಯಗಳು ಹಿಂದೂ ಧರ್ಮದಲ್ಲಿ ಒಡಕು ಮೂಡಿಸುತ್ತಿವೆ. ಯಾವುದೇ ವ್ಯಕ್ತಿ ಯಾವ ಪ್ರದೇಶದಲ್ಲಾದರೂ ದೇಗುಲ ಪ್ರವೇಶಿಸುವ ಹಕ್ಕನ್ನು ಹೊಂದಿದ್ದಾನೆ. ಜಾತಿ ಆಧಾರದಲ್ಲಿ ಆ ಹಕ್ಕನ್ನು ಕಸಿಯುವಂತಿಲ್ಲ. ಈ ಜಾತಿ ತಾರತಮ್ಯಗಳನ್ನು ತೊಲಗಿಸು ವಂಥ ಕೆಲಸ ಮಾಡಿ ಎಂದು ಆರ್‌ಎಸ್‌ಎಸ್‌ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.

Advertisement

ಗುಜರಾತ್‌ನ ವಡೋದರಾದಲ್ಲಿ ಆರ್‌ಎಸ್‌ಎಸ್‌ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಜನರು ದೊಡ್ಡ ದೊಡ್ಡ ಸಾಧನೆ ಮಾಡಿದಾಗ ಜಾತಿ ಕೇಳಲಿಲ್ಲ. ಹೀಗಿರುವಾಗ ದೇವಸ್ಥಾನ ಪ್ರವೇಶ, ಬಾವಿಯಲ್ಲಿ ನೀರು ಸೇದುವುದಕ್ಕೆ ಇಂದಿಗೂ ಜಾತಿ ಆಧರಿಸುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next