Advertisement

RSS ಶ್ಲಾಘನೆ; ಸಭಾಪತಿ ಧನಕರ್‌ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

12:33 AM Aug 02, 2024 | Team Udayavani |

ಹೊಸದಿಲ್ಲಿ: ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಅವರು ಆರ್‌ಎಸ್‌ಎಸ್‌ ಅನ್ನು ಹೊಗಳಿದ ಬೆನ್ನಲ್ಲೇ ಕಾಂಗ್ರೆಸ್‌, ಭಾರತದ ಸಾರ್ವ ಭೌಮತ್ವ ಮತ್ತು ಸಮಗ್ರತೆಯನ್ನು ಧ್ವಂಸಗೊಳಿಸುವ ಇತಿಹಾಸ ಆರ್‌ಎಸ್‌ಎಸ್‌ಗಿದೆ ಎಂದು ಟೀಕಿಸಿದೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ಜೈರಾಂ ರಮೇಶ್‌ ಅವರು, ಆರ್‌ಎಸ್‌ಎಸ್‌ ಹೇಗೆ ರಾಷ್ಟ್ರವಿರೋಧಿ, ಸಂವಿಧಾನ ವಿರೋಧಿ, ಹಿಂಸಾ ತ್ಮಕವಾಗಿದೆ ಎಂಬುದು ದೇಶದ ಮೊದಲ ಗೃಹ ಸಚಿವ ವಲ್ಲಭಭಾಯ್‌ ಪಟೇಲ್‌ ಅವರ ಪತ್ರವ್ಯವ ಹಾರಗಳಿಂದ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ. ಸರ್ದಾರ್‌ಗೆ ಆರ್‌ಎಸ್‌ಎಸ್‌ ಬಹಿಷ್ಕೃತವಾಗಿತ್ತು ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next