Advertisement

ವಿಕ್ರಂ ಇನ್ವೆಸ್ಟ್ಮೆಂಟ್ ನಿಂದ ಕೋಟಿ ಕೋಟಿ ಹಣ ಪಂಗನಾಮ

10:30 AM Mar 11, 2018 | Team Udayavani |

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿ ಲಾಭಾಂಶ ನೀಡೋದಾಗಿ ಅಸೆ ತೋರಿಸಿ ಸಿನಿಮಾ ನಟ ನಟಿಯರು, ಕ್ರೀಡಾ ತಾರೆಯರು ಹಾಗೂ ರಾಜಕಾರಣಿಗಳಿಗೆ 1250 ಕೋಟಿ ರೂಪಾಯಿ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿರುವ ವಿಕ್ರಂ ಇನ್ವೆಸ್ಟ್ಮೆಂಟ್ ಕಂಪೆನಿ ಮಾಡಿದೆ.

Advertisement

ಕಂಪೆನಿಯ ಆಡಳಿತ ಮುಖ್ಯಸ್ಥ ರಾಘವೇಂದ್ರ ಶ್ರೀನಾಥ್ ಸೇರಿದಂತೆ ಸೂತ್ರಂ ಸುರೇಶ್, ನರಸಿಂಹ ಮೂರ್ತಿ, ಪ್ರಹ್ಲಾದ್ ಸೇರಿದಂತೆ ಐವರಿಂದ ಮೋಸ ನಡೆದಿರುವ ಬಗ್ಗೆ ಕೇಸು ದಾಖಲಾಗಿದೆ.

ಒಬ್ಬೊರಿಂದ ತಲಾ ಎಂಟರಿಂದ ಹತ್ತು ಕೋಟಿ ಹಣ ಪಡೆದಿದ್ದು ಲಾಭಾಂಶ ನೀಡದೆ ಪಂಗನಾಮ ಹಾಕಿರುವ ಪಟ್ಟಿಯಲ್ಲಿ ಖ್ಯಾತ ಕ್ರಿಕೆಟಿಗ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಸೇರಿಕೊಂಡಿದ್ದಾರೆ.

ಸ್ಟಾಕ್ ಕಮೊಡಿಟಿಸ್ ಮೇಲೆ ಹಣ ಹೂಡಿಕೆ ಮಾಡೋದಾಗಿ ಹೇಳಿ ಕಳೆದ ಅಕ್ಟೋಬರ್ ನಿಂದ ಯಾರಿಗೂ ಲಾಭಾಂಶ ನೀಡದ ಆರೋಪಿಗಳು, ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ರಾಘವೇಂದ್ರ ಶ್ರೀನಾಥ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next