Advertisement

ಹರಿಹರಪುರ ಮಠಕ್ಕೆ1 ಕೋಟಿ ರೂ ಅನುದಾನ;ಸಿಎಂ ಅಸ್ತು!

02:47 PM Jan 10, 2018 | |

ಶೃಂಗೇರಿ:  ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ ಸಾಫ್ಟ್ ಹಿಂದುತ್ವ ಧೋರಣೆ ಅನುಸರಿಸುತ್ತಿದ್ದು, ಈ ಹಿಂದೆ ತಡೆ ಹಿಡಿಯಲಾಗಿದ್ದ 1 ಕೋಟಿ ರೂಪಾಯಿ  ಅನುದಾನವನ್ನು ಹರಿಹರಪುರ ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮಂಜೂರು ಮಾಡಿರುವ ಬಗ್ಗೆ ವರದಿಯಾಗಿದೆ. 

Advertisement

ಬ್ರಾಹ್ಮಣ ಮತಗಳು ನಿರ್ಣಾಯಕವಾಗಿರುವ ಶೃಂಗೇರಿ ಕ್ಷೇತ್ರ ದಲ್ಲಿರುವ ಹರಿಹರಪುರ ಮಠಕ್ಕೆ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅನುದಾನ ಬಿಡುಗಡೆಗೊಳಿಸಿದ್ದರು, ಆದರೆ ಅನುದಾನಕ್ಕೆ ಕಾಂಗ್ರೆಸ್‌ ಸರ್ಕಾರ ತಡೆ ಹಾಕಿತ್ತು. 

ಈಗ ರಾಜೇಗೌಡ ಎನ್ನುವವರ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆಗೆ ಸಹಿ ಹಾಕಿರುವುದಾಗಿ  ವರದಿಯಾಗಿದೆ. 

ಈ ಅನುದಾನದ ಜೊತೆ ಶೃಂಗೇರಿಯ ಬಂಟರ ಭವನ ಕ್ಕೂ50 ಲಕ್ಷ ರೂಪಾಯಿ  ಅನುದಾನನೀಡಲು ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next