Advertisement

ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿಯಿಂದ ಒಂದು ಕೋಟಿ ರೂ ದೇಣಿಗೆ

08:27 AM May 04, 2020 | keerthan |

ಬೆಂಗಳೂರು: ಲಾಕ್ ಡೌನ್ ಕಾರಣದಿಂದ ರಾಜ್ಯದ ಅಲ್ಲಲ್ಲಿ ಸಿಲುಕಿರುವ ಕಾರ್ಮಿಕರಿಗೆ ಊರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಒಂದು ತಿಂಗಳಿನಿಂದ ಕೆಲಸ ಕಾರ್ಯ ಇಲ್ಲದೆ ಇದ್ದ ಕಾರ್ಮಿಕರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಒಂದು ಕೋಟಿ ರೂಪಾಯಿ ಯನ್ನು ಕೆಎಸ್ ಆರ್ ಟಿಸಿಗೆ ನೀಡಿದೆ.

Advertisement

ಜನರನ್ನು ಬಸ್ ಮೂಲಕ ಉಚಿತವಾಗಿ ಅವರ ಊರಿಗೆ ತಲುಪಿಸಬೇಕು. ಪ್ರಜೆಗಳ ಕ್ಷೇಮವೃ ನಮ್ಮ ಪರಮ ಕರ್ತವ್ಯ . ಅದಕ್ಕಾಗಿ ಒಂದು ಕೋಟಿ ರೂ. ನೀಡುತ್ತಿದ್ದೇವೆ. ಹಣದ ಕೊರತೆ ಬಿದ್ದರೆ ಅದನ್ನೂ ಕೆಪಿಸಿಸಿ ಭರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೆ ಎಸ್ ಆರ್ ಟಿಸಿ ಗೆ ಪತ್ರ ಬರೆದಿದ್ದಾರೆ.

ಆದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಂದಿನ ದಿನಗಳ ಕಾಲ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದ್ದಾರೆ.  ಇಂದಿನಿಂದ ಮೂರು ದಿನಗಳ ಕಾಲ ( ಮಂಗಳವಾರದ ತನಕ) ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆ.ಎಸ್.ಆರ.ಟಿ.ಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next