Advertisement

ಹರಾಜಿಗೆ ಸಜ್ಜಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

09:54 AM Nov 20, 2019 | sudhir |

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂದಿನ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುವ ಹಿನ್ನಲೆಯಲ್ಲಿ ಎಲ್ಲ ಎಂಟು ತಂಡಗಳು ತಮಗೆ ಅಗತ್ಯವಿಲ್ಲದ ಆಟಗಾರರನ್ನು ಬಿಡುಗಡೆಗೊಳಿಸಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 12 ಆಟಗಾರರನ್ನು ಬಿಡುಗಡೆಗೊಳಿಸಿ ಡಿ. 19ರಂದು ಕೋಲ್ಕತಾದಲ್ಲಿ ನಡೆಯುವ ಹರಾಜಿಗೆ ಪೂರ್ವ ಸಿದ್ಧತೆಯನ್ನು ನಡೆಸುತ್ತಿದೆ.

Advertisement

ತಂಡದಲ್ಲಿ ಭಾರೀ ಬದಲಾವಣೆ
ತಂಡದ ಮ್ಯಾನೇಜ್‌ಮೆಂಟ್‌ನಲ್ಲೂ ಬದಲಾವಣೆ ತರಲಾಗಿದೆ. ಪಂಜಾಬ್‌ ತಂಡದ ಕೋಚ್‌ ಆಗಿದ್ದ ನ್ಯೂಜಿಲ್ಯಾಂಡ್‌ನ‌ ಮೈಕ್‌ ಹೆಸ್ಸನ್‌ ಅವರನ್ನು ಈ ಬಾರಿ ಆರ್‌ಸಿಬಿ ತಂಡದ ಕ್ರಿಕೆಟ್‌ ಕಾರ್ಯಾಚರಣೆಯ ನಿರ್ದೇಶಕರಾಗಿ ನೇಮಕಗೊಳಿ ಸಲಾಗಿದೆ. ಹಾಗೆಯೇ ಸೈಮನ್‌ ಕ್ಯಾಟಿಚ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕಗೊಳಿ ಸಲಾಗಿದೆ. ಈ ಮಹತ್ತರ ಬದಲಾವಣೆಯ ಬಳಿಕ ಆರ್‌ಸಿಬಿ ಈ ಬಾರಿಯಾದರೂ ಕಪ್‌ ಗೆಲ್ಲಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next