Advertisement

SI ಮೇಲೆ ಮಚ್ಚು:ಕತ್ತು ಕೊಯ್ದುಕೊಂಡು ರೌಡಿ ನದೀಮ್‌ ಹೈಡ್ರಾಮಾ

10:49 AM Aug 29, 2017 | |

ಬೆಂಗಳೂರು: ಮಫ್ತಿಯಲ್ಲಿ ಕಾರ್ಯಾಚರಣೆಯಲ್ಲಿದ್ದ ಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಪುಡಿ ರೌಡಿ ನದೀಮ್‌ ಟಿವಿ 9 ಕಚೇರಿಗೆ ಬಂದು ಹೈಡ್ರಾಮಾ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. 

Advertisement

ಟಿವಿ 9 ಕಚೇರಿಯ ಎದುರು ಕತ್ತನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಪೊಲೀಸರು ನನ್ನ ಮಾವ ಮತ್ತು ಅಣ್ಣ ನನ್ನು ಕರೆದೊಯ್ದಿದ್ದಾರೆ ಅವರನ್ನು ಬಿಡಿಸಿಕೊಡಿ ಎಂದು ಕೂಗಾಡಿದ್ದಾನೆ. 

ರೌಡಿ ನದೀಮ್‌ ಟಿವಿ 9 ಕಚೇರಿ ಬಳಿ ಇರುವುದು ತಿಳಿದು 10 ನಿಮಷಗಳ ಒಳಗೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. 

ಅಗಸ್ಟ್‌ 24 ರ ಸಂಜೆ ಉಮರ್‌ ಎಂಬ ರೌಡಿ ಶೀಟರ್‌ನ ಹತ್ಯೆಗೆ ಸ್ಕೆಚ್‌ ಹಾಕಿದ್ದ ರೌಡಿ  ನದೀಮ್‌ ಗ್ಯಾಂಗನ್ನು  ಡಿಜೆ ಹಳ್ಳಿ ಠಾಣೆಯ ಎಸ್‌ಐ ನಯಾಝ್ ಅಹಮದ್‌ ತಡೆಯಲು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ರೌಡಿಗಳು ಎಸ್‌ಐ ನಯಾಜ್‌ ಹಣೆಗೆ ಮಚ್ಚಿನಿಂದ ಇರಿದು ಪರಾರಿಯಾಗಿದ್ದರು.

ಎಸ್‌ಐ ನಯಾಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇದೀಗ ಚೇತರಿಸಿಕೊಂಡಿದ್ದಾರೆ. 

Advertisement

ಕೃತ್ಯದಲ್ಲಿ ಇನ್ನೂ ಕೆಲ ರೌಡಿಗಳು ಭಾಗಿಯಾಗಿದ್ದು ಅವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next