Advertisement

ಬೆಂಗಳೂರಿನಲ್ಲಿ ರೌಡಿ ಮುಲಾಮ ಬಂಧನ; ನೂರಾರು ಕೋಟಿ ಆಸ್ತಿಯ ಒಡೆಯ!

10:46 AM Dec 26, 2018 | |

ಬೆಂಗಳೂರು: ಸಿಸಿಬಿ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ  ಕಾರ್ಯಾಚರಣೆ ನಡೆಸಿ ರೌಡಿ ಮುಲಾಮನನ್ನು ಬಂಧಿಸಿದ್ದಾರೆ.

Advertisement

ಕುಖ್ಯಾತ ರೌಡಿ ಬಲರಾಮನ ಸಹಚರನಾಗಿದ್ದ  ಮುಲಾಮ ಅಲಿಯಾಸ್‌ ಲೋಕೇಶ್‌‌ನನ್ನು ಮುಂಬಯಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ.

ಮುಲಾಮನ ವಿರುದ್ದ 2 ಜೀವ ಬೆದರಿಕೆ ಕೇಸ್‌ಗಳು ಸೇರಿ ನಗರದ ಹಲವೆಡೆ ವಿವಿಧ ಪ್ರಕರಣಗಳು ದಾಖಲಾಗಿವೆ.

ರಾಜರಾಜೇಶ್ವರಿ ನಗರದಲ್ಲಿ ಬಹುಮಹಡಿ ಬಂಗಲೆ ಸೇರಿದಂತೆ ಕೋಟ್ಯಂತರ ರೂಪಾಯಿ ಆಸ್ತಿ  ಸಂಪಾದಿಸಿಕೊಂಡಿದ್ದಾನೆ. ರಿಯಲ್‌ ಎಸ್ಟೇಟ್‌ ದಂಧೆಯನ್ನೂ ಈತ ನಡೆಸುತ್ತಿದ್ದು, ಹಲವರಿಗೆ ಜೀವ ಬೆದರಿಕೆ ಹಾಕಿದ್ದ  ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next