Advertisement

ಬಸವಕಲ್ಯಾಣ:ಮನೆಯ ಮೇಲ್ಛಾವಣಿ ಕುಸಿದು 6 ಮಂದಿ ದುರ್ಮರಣ

09:02 AM Jun 27, 2019 | Vishnu Das |

ಬೀದರ್‌: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Advertisement

ಮೃತ ದುರ್ದೈವಿಗಳು ನದೀಮ್‌ ಶೇಖ್‌ (45 ) ಫ‌ರಿದಾ ಬಾನು ,ಆಯಿಷಾ ಬಾನು (15 ),ಮೆಹಾತಾಬಿ(14), ಫೈಜಾನ್‌ ಅಲಿ (6),ಫ‌ರಾನ್‌ ಅಲಿ (4) ಎನ್ನುವವರಾಗಿದ್ದಾರೆ.

ನೂರು ವರ್ಷಕ್ಕೂ ಹಳೆಯದಾದ ಮನೆಯ ಗೋಡೆಗಳು ಮಳೆಯಿಂದಲಾಗಿ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಮನೆಯ ಛಾವಣಿ ಮತ್ತು ಗೋಡೆ ಕುಸಿದು ಬಿದ್ದ ಪರಿಣಾಮ ಮಲಗಿದ್ದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬಸವಕಲ್ಯಾಣ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next