Advertisement

ಸ್ವಾಭಿಮಾನಿ ವಿದ್ಯಾರ್ಥಿ ಕಾರ್ಯಾಧ್ಯಕ್ಷರಾಗಿ ರೋನಕ್‌ ಜೆ. ಶೆಟ್ಟಿ

02:27 PM Sep 08, 2017 | |

ಪುಣೆ: ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಅಂಗ ಸಂಸ್ಥೆಯಾದ ಸ್ವಾಭಿಮಾನಿ ವಿದ್ಯಾರ್ಥಿ ಪರಿಷದ್‌ ಇದರ ರಾಜ್ಯ ಕಾರ್ಯಾಧ್ಯಕ್ಷರಾಗಿ ಪುಣೆಯ ರೋನಕ್‌ ಜಯ ಶೆಟ್ಟಿ ಆಯ್ಕೆಗೊಂಡಿದ್ದಾರೆ.

Advertisement

ಸೆ. 1 ರಂದು ಪುಣೆಯ ಆಲ್ಪಾಬಚತ್‌ ಸಾಂಸ್ಕೃತಿಕ ಸಂಕುಲದಲ್ಲಿ ನಡೆದ ಸ್ವಾಭಿಮಾನಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸ್ವಾಭಿಮಾನಿ ಪಕ್ಷದ ಅಧ್ಯಕ್ಷ ರಾಜು ಶೆಟ್ಟಿ ಅವರು ಈ ಆಯ್ಕೆಯನ್ನು ಘೋಷಿಸಿ ರೋನಕ್‌ ಶೆಟ್ಟಿ ಅವರನ್ನು ಅಭಿನಂದಿಸಿದರು. ರೋನಕ್‌ ಜಯ ಶೆಟ್ಟಿ ಅವರು ಸ್ವಾಭಿಮಾನಿ ಪಕ್ಷದ ಉಪಾಧ್ಯಕ್ಷರಾಗಿದ್ದ ದಿ| ಜಯ ನೇಮು ಶೆಟ್ಟಿ ಹಾಗೂ ಗೀತಾ ಜೆ. ಶೆಟ್ಟಿ ದಂಪತಿಯ ಪುತ್ರ. ಸಿಂಹಘಡ್‌ ಲಾ ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್‌ಎಲ್‌ಬಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಅವರು ಪುಣೆ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು ಯುವ ಸಮೂಹವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next