Advertisement

ಕಳ್ಳರನ್ನು ಹಿಡಿದು ಪೊಲೀಸ್ ಠಾಣೆಗೆ ತಂದರೂ ಬಂಧಿಸದ ಪೊಲೀಸರು!

02:02 PM Sep 12, 2020 | sudhir |

ರೋಣ: ಸಾರ್ವಜನಿಕರು ಕಳ್ಳರನ್ನು ಹಿಡಿದು ತಂದರೂ ಈ ಪ್ರಕರಣ ನಮ್ಮ ಠಾಣಾ ವ್ಯಾಪ್ತಿಗೆ ಬರಲ್ಲ ಎಂದು ರೋಣ ಹಾಗೂ ನರೇಗಲ್ಲ ಠಾಣೆ ಪೊಲೀಸರು ಕಾಲಹರಣ ಮಾಡಿದ್ದು, ಇತ್ತ ಕಳ್ಳನನ್ನು ಹಿಡಿದು ತಂದ ಸಾರ್ವಜನಿಕರು ದಿನವಿಡೀ ಠಾಣೆಯಿಂದ ಠಾಣೆಗೆ ಸುತ್ತಾಡಿ ಕಳ್ಳರನ್ನು ಬಿಟ್ಟು ಕಳಿಸಿದ ಘಟನೆ ನಡೆದಿದೆ.

Advertisement

ರೋಣ ಪಟ್ಟಣದಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ನಡೆಯುವ ಸಂತೆಯಲ್ಲಿ ಸಾರ್ವಜನಿಕರು ಮೊಬೈಲ್‌ ಕಳ್ಳತನವಾಗುತ್ತಿದ್ದವು. ಈ ಕುರಿತು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರು ಯಾವುದೇ ಪ್ರಯೋಜನ ವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಖುದ್ದು ಕಾರ್ಯಾಚರಣೆಗಿಳಿದು ಗುರುವಾರ ಸಂತೆಯಲ್ಲಿ ಮೊಬೈಲ್‌ ಕಳ್ಳತನ ಮಾಡುತ್ತಿದ್ದವರನ್ನು ಹಿಡಿದಿದ್ದಾರೆ. ಈ ವೇಳೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ನಂತರ ಕಳ್ಳರನ್ನು ರೋಣ ಠಾಣೆಗೆ ಕರೆತಂದ ಜನತೆ ಜಕ್ಕಲಿ ಗ್ರಾಮದವರು ಎಂದು ತಿಳಿಯುತ್ತಿದ್ದಂತೆ ಕಳ್ಳರನ್ನು ನರೇಗಲ್ಲ ಠಾಣೆಗೆ ಒಪ್ಪಿಸಿ ಎಂದು ಪೊಲೀಸರು ತಿಳಿಸಿದ್ದಾರೆ.

ನರೇಗಲ್ಲ ಠಾಣೆಗೆ ಕರೆದೊಯ್ದರೆ ಘಟನೆ ನಡೆದಿದ್ದು ರೋಣ ಠಾಣಾ ವ್ಯಾಪ್ತಿಯಲ್ಲಿ ಅದೇ ಠಾಣೆಗೆ ಕಳ್ಳರನ್ನು ಒಪ್ಪಿಸಿ ಎಂದು ಅವರೂ ಸಾಗ ಹಾಕಿದ್ದಾರೆ. ಈ ನಡುವೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ರ ವರೆಗೆ ಕಳ್ಳರನ್ನು ಹಿಡಿದು ಠಾಣೆಗಳನ್ನು ಸುತ್ತಾಡಿದ ಸಾರ್ವಜನಿಕರು ಬೇರೆ ದಾರಿ ಕಾಣದೇ ಕಳ್ಳರನ್ನು ಕೈ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next