Advertisement

ರೋಣ: ಹೊತ್ತಿ ಉರಿದ ಕಾರು; ಮೂವರು ಸ್ಥಳದಲ್ಲೇ ದುರ್ಮರಣ

07:52 PM Mar 19, 2022 | Team Udayavani |

ರೋಣ(ಗದಗ): ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು ಹೊತ್ತಿ ಉರಿದಿದ್ದು, ಕಾರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅವಘಡ ರೋಣ ಪಟ್ಟಣ ಹೊರವಲಯದ ಸಾರಿಗೆ ಬಸ್ ಡಿಪೋ ಬಳಿ ಶನಿವಾರ ಸಂಭವಿಸಿದೆ.

Advertisement

ಮೃತರು ಗದಗ ಮೂಲದ ಯುವಕರು ಎಂಬ ಪ್ರಾರ್ಥಮಿಕ ಮಾಹಿತಿ ಲಭ್ಯವಾಗಿದ್ದು, ಹೆಸರು ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.

ಶನಿ ವಾರ ಸಂಜೆ ರೋಣದಿಂದ ಗದಗ ನಗರದ ಕಡೆಗೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಏಕಾಏಕಿ ಮರಕ್ಕೆ ಢಿಕ್ಕಿ ಹೊಡೆದಿದೆ. ಕ್ಷಣ ಮಾತ್ರದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು, ಧಗಧಗನೇ ಉರಿದಿದೆ. ಈ ವೇಳ ದಾರಿ ಹೋಕರು ಕಾರಿನಲ್ಲಿದ್ದವರನ್ನು ಹೊರಗೆಳೆದು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಈ ವೇಳೆಗೆ ಕಾರಿನಲ್ಲಿದ್ದ ಮೂವರು ಯುವಕರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next