Advertisement

ಖೇಲ್‌ರತ್ನಕ್ಕೆ ರೋಹಿತ್‌ ಹೆಸರು ಶಿಫಾರಸು

10:40 PM May 30, 2020 | Sriram |

ಹೊಸದಿಲ್ಲಿ: ಭಾರತ ಏಕದಿನ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮ ಹೆಸರನ್ನು ಖೇಲ್‌ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.

Advertisement

ಇವರೊಂದಿಗೆ ಶಿಖರ್‌ ಧವನ್‌, ಇಶಾಂತ್‌ ಶರ್ಮ, ದೀಪ್ತಿ ಶರ್ಮ ಹೆಸರನ್ನೂ ಅರ್ಜುನ ಪ್ರಶಸ್ತಿಗೆ ಸೂಚಿಸಲಾಗಿದೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ.

ಕಳೆದ ಇಂಗ್ಲೆಂಡ್‌ ಮತ್ತು ವೇಲ್ಸ್‌ ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಸಾಮಾನ್ಯ ಸಾಧನೆ ತೋರಿದ ರೋಹಿತ್‌ ಶರ್ಮ ಈ ಪ್ರಶಸ್ತಿಗೆ ಅರ್ಹರು ಎಂದು ಬಿಸಿಸಿಐ ಹೇಳಿದೆ. 2018ರಲ್ಲೂ ಧವನ್‌ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತಾದರೂ ಇದು ಅವರಿಗೆ ಒಲಿದಿರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next