Advertisement

ನಿರೀಕ್ಷೆಯಂತೆ ರೋಹಿತ್‌ ಶರ್ಮ ಭಾರತ ತಂಡಕ್ಕೆ ನಾಯಕ : ಕೊಹ್ಲಿಗೆ ರೆಸ್ಟ್

07:37 AM Nov 10, 2021 | Team Udayavani |

ಹೊಸದಿಲ್ಲಿ: ಎಲ್ಲರ ನಿರೀಕ್ಷೆಯಂತೆ ರೋಹಿತ್‌ ಶರ್ಮ ಭಾರತೀಯ ಟಿ20 ಕ್ರಿಕೆಟ್‌ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕತ್ವ ತ್ಯಜಿಸಿದ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೆ.ಎಲ್‌. ರಾಹುಲ್‌ ಉಪನಾಯಕರಾಗಿದ್ದರೆ.

Advertisement

“ನ್ಯೂ ಲುಕ್‌’ ಹೊಂದಿರುವ ಈ ತಂಡದಲ್ಲಿ ಐಪಿಎಲ್‌ ಹೀರೋಗಳಾದ ಟಾಪ್‌ ಸ್ಕೋರರ್‌ ಋತುರಾಜ್‌ ಗಾಯಕ್ವಾಡ್‌, ಅತ್ಯಧಿಕ ವಿಕೆಟ್‌ ಉರುಳಿಸಿದ ಹರ್ಷಲ್‌ ಪಟೇಲ್‌, ಬಿರುಸಿನ ಆರಂಭಕಾರ ಹಾಗೂ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌, ಆವೇಶ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಯಾವುದೇ ಪರಿಣಾಮ ಬೀರದ ಹಾರ್ದಿಕ್‌ ಪಾಂಡ್ಯ ಅವರನ್ನು ಕೈಬಿಡಲಾಗಿದೆ.

ಚಹಲ್‌, ಸಿರಾಜ್‌ ವಾಪಸ್‌
ಸೀನಿಯರ್‌ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌, ಪೇಸ್‌ ಬೌಲರ್‌ ಮೊಹಮ್ಮದ್‌ ಸಿರಾಜ್‌ ತಂಡಕ್ಕೆ ವಾಪಸಾಗಿದ್ದಾರೆ. ಟಿ20 ವಿಶ್ವಕಪ್‌ ವೇಳೆ ಮೀಸಲು ಆಟಗಾರರಾಗಿದ್ದ ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಪ್ರಧಾನ ತಂಡಕ್ಕೆ ಮರಳಿದ್ದಾರೆ. ವಿಶ್ವಕಪ್‌ಗಾಗಿ 4 ವರ್ಷಗಳ ಬಳಿಕ ಮರಳಿದ ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ತಂಡದಲ್ಲಿ ಮುಂದುವರಿದಿದ್ದಾರೆ.

ವಿರಾಟ್‌ ಕೊಹ್ಲಿ ಜತೆಗೆ ಪ್ರಧಾನ ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಆಲ್‌ರೌಂಡರ್‌ ರವೀಂದ್ರ ಜಡೇಜ ಅವರಿಗೂ ವಿಶ್ರಾಂತಿ ನೀಡಲಾಗಿದೆ.

ಗೋಡೆ ಖ್ಯಾತಿಯ ರಾಹುಲ್‌ ದ್ರಾವಿಡ್‌ ಈ ಸರಣಿ ಮೂಲಕ ಸೀನಿಯರ್‌ ತಂಡದ ಕೋಚ್‌ ಆಗಿ ಕಾರ್ಯಾರಂಭಿಸಲಿದ್ದಾರೆ.

Advertisement

ಇದನ್ನೂ ಓದಿ:ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ

3 ಪಂದ್ಯಗಳ ಸರಣಿ
ನ್ಯೂಜಿಲ್ಯಾಂಡ್‌ ವಿರುದ್ಧದ 3 ಟಿ20 ಪಂದ್ಯಗಳನ್ನು ಜೈಪುರ (ನ. 17), ರಾಂಚಿ (ನ. 19) ಮತ್ತು ಕೋಲ್ಕತಾದಲ್ಲಿ (ನ. 21) ಆಡಲಾಗುವುದು.

ಭಾರತ ತಂಡ
ರೋಹಿತ್‌ ಶರ್ಮ(ನಾಯಕ), ಕೆ.ಎಲ್‌. ರಾಹುಲ್‌(ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ವೆಂಕಟೇಶ್‌ ಅಯ್ಯರ್‌, ಯಜುವೇಂದ್ರ ಚಹಲ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next