Advertisement

ಸೆಮಿಫೈನಲ್‌ ಸೋಲಿನಿಂದ ಬೇಸರ: ರೋಹಿತ್‌

12:13 AM Jul 13, 2019 | Team Udayavani |

ಮ್ಯಾಂಚೆಸ್ಟರ್‌: ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 18 ರನ್‌ಗಳ ಸೋಲನುಭವಿಸಿ ಭಾರತ ವಿಶ್ವಕಪ್‌ ಕೂಟದಿಂದ ಹೊರಬಿದ್ದಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

Advertisement

ನಾವು ಲೀಗ್‌ ಹಂತದ ವರೆಗೇ ಉತ್ತಮ ಪ್ರದರ್ಶನ ನೀಡುತ್ತ ಬಂದು ಮಹತ್ವದ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿರುವುದು ತುಂಬಾ ಬೇಸರವಾಗಿದೆ. ಪ್ರತೀ ಹಂತದಲ್ಲೂ ನನಗೆ ಇದೇ ರೀತಿ ಸಂಭವಿಸುತ್ತಿದೆ. ಎಲ್ಲ ಪಂದ್ಯದಲ್ಲೂ ಉತ್ತಮವಾಗಿ ಆಡಿ ಕೊನೆಗೆ ನಿರ್ಣಾಯಕ ಪಂದ್ಯದಲ್ಲಿ ಪ್ರತೀ ಬಾರಿಯೂ ವಿಫ‌ಲವಾಗುತ್ತಿದ್ದೇನೆ. ಈ ಕುರಿತು ನನಗೆ ನನ್ನ ಆಟದ ಬಗ್ಗೆ ನೋವು ಆಗುತ್ತಿದೆ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.
ವಿಶ್ವಕಪ್‌ ಕೂಟದಲ್ಲಿ 5 ಶತಕ ಬಾರಿಸಿ ದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಇದೆಯಾದರೂ ಸೆಮಿಫೈ ನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದಕ್ಕೆ ದುಃಖ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next