Advertisement

ರೋಹಿಂಗ್ಯಾ ನಿರಾಶ್ರಿತರಿದ್ದ ದೋಣಿ ಮುಳುಗಡೆ: 12 ಮಂದಿ ಸಾವು

04:09 PM Mar 21, 2024 | Team Udayavani |

ಜಕಾರ್ತಾ: ಮ್ಯಾನ್ಮಾರ್‌ನಿಂದ ಇಂಡೋ ನೇಷ್ಯಾಕ್ಕೆ ತೆರಳುತ್ತಿದ್ದ 12 ಮಂದಿ ರೋಹಿಂಗ್ಯಾ ಮುಸಲ್ಮಾನ ನಿರಾಶ್ರಿತರು ದಡ ಸೇರುವ ಮುನ್ನವೇ ವಿಪತ್ತಿಗೆ ಸಿಲುಕಿದ್ದು, ಅವರಿದ್ದ ದೋಣಿ ಇಂಡೋನೇಷ್ಯಾದ ಉತ್ತರ ಕರಾವಳಿಯಲ್ಲಿ ಮುಳು ಗಡೆಯಾಗಿದೆ.

Advertisement

ಆಚೆಬರತ್‌ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ದೋಣಿ ಮುಳುಗಡೆಯಾಗಿದ್ದು, ತತ್‌ಕ್ಷಣವೇ ಸ್ಥಳೀಯ ಮೀನುಗಾರರು ದೋಣಿಯಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ. ಆದಾಗ್ಯೂ ಕೇವಲ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಮಾತ್ರ ರಕ್ಷಿಸಲಾಗಿದೆ. ಉಳಿದವರು ನೀರಿನ ಸೆಳೆತಕ್ಕೆ ಸಿಕ್ಕಿ ಬಿದ್ದಿದ್ದಾರೆಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ.

ಜನಾಂಗೀಯ ಘರ್ಷಣೆ, ಹಿಂಸಾಚಾರದಿಂದಾಗಿ ಸಂಖ್ಯೆ ಯಲ್ಲಿ ರೋಹಿಂಗ್ಯಾ ನಿರಾಶ್ರಿತರು ನೆರೆ ರಾಷ್ಟ್ರ ಗಳಿಗೆ ವಲಸೆ ಹೋಗುತ್ತಾರೆ. ಇಂಡೋ ನೇಷ್ಯಾಗೆ ಜಲಮಾರ್ಗದಿಂದಲೇ ಸಾಗು ವುದರಿಂದ ಇಂಥ ಅವಘಡಗಳು ಆಗಾಗ ಸಂಭವಿ ಸುತ್ತಲೇ ಇರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next