Advertisement

ಕರ್ನಾಟಕ ಕ್ರಿಕೆಟ್ ಗೆ ರೋಜರ್ ಬಿನ್ನಿ ಸಾರಥಿ

12:05 PM Oct 05, 2019 | keerthan |

ಬೆಂಗಳೂರು: ಮಾಜಿ ಆಲ್ ರೌಂಡರ್, ಮೊದಲ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಇನ್ನು ಮುಂದೆ ಕರ್ನಾಟಕ ಕ್ರಿಕೆಟ್ ನ ಸಾರಥಿ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿನ್ನಿ ಜಯ ಗಳಿಸಿದ್ದಾರೆ.

Advertisement

ರಾಜ್ಯ ಕ್ರಿಕೆಟ್ ಸಂಸ್ಥಗೆ ಗುರುವಾರ ಚುನಾವಣೆ ನಡೆದಿದ್ದು, ತಡರಾತ್ರಿ ಫಲಿತಾಂಶ ಹೊರಬಿದ್ದಿದೆ. ರೋಜರ್ ಬಿನ್ನಿ ಅವರಿಗೆ 943 ಮತಗಳು ಲಭಿಸಿದ್ದರೆ, ಪ್ರತಿಸ್ಪರ್ಧಿ ಎಂ. ಎಂ. ಹರೀಶ್ ಅವರಿಗೆ 111 ಮತಗಳು ಲಭಿಸಿವೆ.

ಜೆ. ಅಭಿರಾಂ ಅವರು ಉಪಾಧ್ಯಕ್ಷರಾಗಿ, ಸಂತೋಶ್ ಮೆನನ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬೆಂಬಲಿತ ತಂಡ ಎಲ್ಲಾ 16 ಸೀಟ್ ಗಳನ್ನು ಗೆದ್ದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next