Advertisement

ಮಾಜಿ ಸಿಎಂ ಕುಮಾರ ಸ್ವಾಮಿ ವಿರುದ್ಧ ಗುಡುಗಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್

03:21 PM Jul 09, 2021 | Team Udayavani |

ಬೆಂಗಳೂರು: ಅಂಬರೀಶ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗರಂ ಆಗಿದ್ದಾರೆ.

Advertisement

ಇಂದು (ಜುಲೈ 09) ಮಾಧ್ಯಮದವರ ಜೊತೆ ಮಾತನಾಡಿದ ಅವರು,’ಕುಮಾರಸ್ವಾಮಿ ನನಗೆ ರಾಜಕೀಯದಿಂದ ಪರಿಚಯ ಆದವರಲ್ಲ, ಸಿನಿಮಾದಿಂದ ಪರಿಚಯ. ಅವರನ್ನು ನಾನು ಕುಮಾರಣ್ಣ ಎಂದು ಕರೆಯುತ್ತೇನೆ, ಅವರು ನನಗೆ ವೆಂಕಟೇಶ್ ಅಣ್ಣ ಎಂದು ಕರೆಯುತ್ತಾರೆ. ನಾನು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ. ಆದರೆ ಅಂಬರೀಶ್ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ.

ಕುಮಾರಸ್ವಾಮಿ ಅವರೇ ನಿಮಗೆ ಒಳ್ಳೆ ಹೆಸರಿದೆ, ಸಾವಿನ ರಾಜಕಾರಣ ಮಾಡಿ ಹೆಸರು ಕೆಡಿಸಿಕೊಳ್ಳಬೇಡಿ ಎಂದು ರಾಕ್ ಲೈನ್ ಸಲಹೆ ನೀಡಿದ್ದಾರೆ. ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ಏನು ಮೋಸ ಮಾಡಿದೆ ನಿಮಗೆ. ಚಿತ್ರರಂಗದಿಂದ ಏನು ಲಾಭ ಪಡಿದ್ದೀರಿ ಎನ್ನುವುದು ನಿಮಗೆ ಗೊತ್ತು. ನಿಮ್ಮ ಮನೆಯವರು ಸಹ ಚಿತ್ರರಂಗದಲ್ಲಿ ಸುಮಾರು ಜನ ಇದ್ದಾರೆ. ಅದನ್ನು ಮರಿಬಾರ್ದು ನೀವು. ಮುಖ್ಯಮಂತ್ರಿ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದಾರೆ. ಒಂದು ಕೆಲಸ ಮಾಡಿದ್ದೀರಾ? ನಾವು ನಿಮ್ಮನ್ನು ಕೇಳಿದ್ವಾ, ನಿಮ್ಮ ಮನಸ್ಥಿತಿ ಏನು ಅಂತ ಗೊತ್ತು. ನಾವು ನಿಮ್ಮನ್ನ ಕೇಳಲ್ಲ” ಎಂದು ರಾಕ್ ಲೈನ್ ಆಕ್ರೋಶ ವ್ಯಕ್ತಪಡಿಸಿದ್ರು

ಅಂಬರೀಶ್ ಸತ್ತಾಗ ನಾವು ಮಂಡ್ಯಗೆ ಕರೆದುಕೊಂಡು ಹೋಗಿದ್ದು ಅಂತ ಹೇಳಿದ್ದೀರಿ. ನನ್ನ ಬಳಿ ಸಾಕ್ಷಿ ಇದೆ. ಅಭಿ ಒತ್ತಾಯ ಮಾಡಿ ಮಂಡ್ಯಗೆ ಕರೆದುಕೊಂಡು ಹೋಗಬೇಕು ಎಂದು ಹೇಳುತ್ತಿದ್ದಾರೆ ಅಂತ ನೀವೆ ಹೇಳಿದ್ದೀರಿ. ನಾನು ಪಕ್ಕದಲ್ಲೇ ನಿಂತಿದ್ದೆ. ಸಾವಿನ ರಾಜಕಾರಣ ಯಾಕೆ ಮಾಡುತ್ತಿದ್ದೀರಿ? ನಿಮಗೆ ಒಳ್ಳೆಯ ಹೆಸರಿದೆ, ಅದನ್ನು ಯಾಕೆ ಕೆಡಿಸಿಕೊಳ್ಳುತ್ತೀರಿ” ಎಂದು ರಾಕ್ ಲೈನ್ ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next