Advertisement

ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

03:55 AM Jul 04, 2017 | Team Udayavani |

ಪುತ್ತೂರು: ನಗರದ ಹೊರ ವಲಯದ ಮಂಜಲ್ಪಡ್ಪುವಿನಲ್ಲಿ ಉದ್ಯಮಿಯೋರ್ವರ ಕೈಯಿಂದ ಮೂರು ಲಕ್ಷ ನಗದು ತುಂಬಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮುರ ನಿವಾಸಿ ಮನೀಶ್‌ (19) ಮತ್ತು ಕೆಮ್ಮಾಯಿ ಬೀರ್ನಹಿತ್ತಿಲು ನಿವಾಸಿ ವಿಖ್ಯಾತ್‌ ದೇವಾಡಿಗ (21) ಬಂಧಿತರು. ಆರೋಪಿಗಳಿಂದ 73 ಸಾವಿರ ರೂ. ನಗದು, ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಪ್ರಕರಣದ ವಿವರ
ಜೂ.22 ರಂದು ನಗರದ ಹೊರವಲಯದ ಮಂಜಲ್ಪಡ್ಪು ಮಂಗಳ ಸ್ಟೋರ್‌ನ ಪಾಲುದಾರ ಸುದರ್ಶನ್‌ ನಾಯಕ್‌ ಅವರು ರಾತ್ರಿ 8.10ರ ಸುಮಾರಿಗೆ ಅಂಗಡಿ ವ್ಯವಹಾರ ಮುಗಿಸಿಕೊಂಡು ವ್ಯವಹಾರದ ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಸಂಸ್ಥೆಯ ಇನ್ನೊಬ್ಬರು ಪಾಲುದಾರ ಅಕ್ಷಯ್‌ ಎಸ್‌.ಕೆ. ಅವರ ಮಂಜಲ್ಪಡ್ಪುವಿನಲ್ಲಿರುವ ಮನೆಗೆ ಬಂದಿದ್ದರು. ಈ ಸಂದರ್ಭ ಆರೋಪಿಗಳನ್ನು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು.ಸುದರ್ಶನ್‌ ನಾಯಕ್‌ ಅವರು ಅಕ್ಷಯ್‌ ಎಸ್‌.ಕೆ. ಅವರ ಮನೆಯ ಅಂಗಳಕ್ಕೆ ತಲುಪಿದಾಗ ಅಲ್ಲಿಗೆ ಬಂದ ಆರೋಪಿಗಳನ್ನು ವಿಳಾಸ ಕೇಳುವ ನೆಪದಲ್ಲಿ ನಾಯಕ್‌ ಅವರ ಗಮನ ಬೇರೆಡೆ ಸೆಳೆದು,  ಕೈಯ್ಯಲ್ಲಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದರು.  ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ಆರಂಭಿಸಿದ ನಗರ ಠಾಣಾ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರ ತಂಡ ಸೋಮವಾರ ಮುಂಜಾನೆಯ ಹೊತ್ತಿಗೆ ಕೆಮ್ಮಾಯಿ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್‌ಐ ಒಮನಾ, ಕ್ರೈಂ ಎಸ್‌ಐ ವೆಂಕಟೇಶ್‌, ಎಎಸ್‌ಐ ಚಿದಾನಂದ ರೈ, ಸಿಬಂದಿ ದಾಮೋದರ ನಾಯ್ಕ, ಕೃಷ್ಣಪ್ಪ, ಮಂಜುನಾಥ, ಪ್ರಶಾಂತ್‌ ರೈ, ಹರೀಶ್‌, ಪ್ರಶಾಂತ್‌ ಶೆಟ್ಟಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next