Advertisement

ಉಪ್ಪಿನಂಗಡಿ: ಮನೆಯ ಹೆಂಚು ಸರಿಸಿ ದರೋಡೆಗೆ ವಿಫಲಯತ್ನ!

12:56 PM Mar 27, 2021 | Team Udayavani |

ಉಪ್ಪಿನಂಗಡಿ: ಮನೆ ದರೋಡೆಗೆ ವಿಫಲಯತ್ನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ತನ್ನಿರುಪಂತ ಗ್ರಾಮದಲ್ಲಿ ನಡೆದಿದೆ.

Advertisement

ತಣ್ಣೀರುಪಂಥ ಗ್ರಾಮದ ಜನತಾ ಕಾಲೋನಿಯ ಫಾರೂಕ್ ಮನೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.

ಮನೆಯ ಯಜಮಾನ ಫಾರೂಕ್ ಅವರು ಮಸೀದಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ರಾತ್ರಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ಮಹಡಿ ಏರಿ ಮನೆಯ ಹಂಚು ಸರಿಸುವ ಯತ್ನ ಮಾಡಿದ್ದಾರೆ. ಕಳ್ಳರು ಹಂಚು ಸರಿಸುವಾಗ ಪಕ್ಕಾಸು ಮುರಿದು ಸದ್ದಾಗಿದೆ. ಮನೆಯಲ್ಲಿ ಮಕ್ಕಳ ಜೊತೆ ಮಲಗಿದ್ದ ಫಾರೂಕ್ ಅವರ ಪತ್ನಿಗೆ ಸದ್ದು ಕೇಳಿಸಿ ಎಚ್ಚರವಾಗಿದೆ.

ಇದನ್ನೂ ಓದಿ:ಮನ್ಸೂಖ್‌ ಕೊಲೆ ಪ್ರಕರಣ ಭೇದಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌

Advertisement

ಪತ್ನಿ ಲೈಟ್ ಹಾಕಿ ಕೂಗಿಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಆದರೆ ಸುತ್ತಮುತ್ತಲಿನ ಕರಾಯ ಕಲ್ಲೇರಿ ಕುಪ್ಪೆಟ್ಟಿ ತುರ್ಕಲಿಕೆ ಮುಂತಾದ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮನೆಗಳ್ಳತನ ನಡೆಯುತ್ತಿದೆ. ದೂರು ನೀಡಿದ್ದರೂ ಕಳ್ಳತನದ ಪ್ರಕರಣಗಳು ನಿಂತಿಲ್ಲ.

ಇದನ್ನೂ ಓದಿ: ನೇತ್ರಾವತಿ ಸೇತುವೆಯಲ್ಲಿ ಕಾರು- ರಿಕ್ಷಾ ಅಪಘಾತ: ರಿಕ್ಷಾ ಚಾಲಕ ದಾರುಣ ಸಾವು

Advertisement

Udayavani is now on Telegram. Click here to join our channel and stay updated with the latest news.

Next