Advertisement

ನಿರ್ದೇಶಕನ ಮನೆಯಲ್ಲಿ ಹಣ,ಚಿನ್ನ ದರೋಡೆಗೈದು ರಾಷ್ಟ್ರ ಪ್ರಶಸ್ತಿ ಪದಕ ಹಿಂತಿರುಗಿಸಿದ ಕಳ್ಳರು

02:46 PM Feb 13, 2024 | Team Udayavani |

ಚೆನ್ನೈ: ‘ಕಡೈಸಿ ವಿವಸಾಯಿ’ ಮತ್ತು ‘ಕಾಕ ಮುಟೈ’ ಸಿನಿಮಾದ ನಿರ್ದೇಶಕ ಮಣಿಕಂಠನ್‌ ಅವರ ಮಧುರೈ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಳೆದ ಕೆಲ ದಿನಗಳ ಹಿಂದೆ ಅವರ ಮಧುರೈನ ಉಸಿಲಂಪಟ್ಟಿ ನಿವಾಸದಲ್ಲಿ ಕಳ್ಳತನ ನಡೆದಿದೆ. ನಿವಾಸಕ್ಕೆ ನುಗ್ಗಿದ ಕಳ್ಳರ ಗುಂಪು ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

15 ಪವನ್ ಚಿನ್ನಾಭರಣ, 1 ಲಕ್ಷ ರೂಪಾಯಿ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ಮಣಿಕಂಠನ್‌ ಅವರು ಉಸಿಲಂಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ದೂರು ದಾಖಲಿಸಿದ್ದ ಒಂದು ದಿನದ ಬಳಿಕ ಕಳ್ಳತನ ಆದ ಮನೆಯ ಕಂಪೌಂಡ್‌ ನಲ್ಲಿ ಪ್ಲ್ಯಾಸ್ಟಿಕ್‌ ಚೀಲವೊಂದರಲ್ಲಿ ಕದ್ದುಕೊಂಡು ಹೋಗಿದ್ದ ಅವರ ರಾಷ್ಟ್ರ ಪ್ರಶಸ್ತಿಯ ಪದಕಗಳೊಂದಿಗೆ ಕ್ಷಮಾಪಣಾ ಪತ್ರವನ್ನು ಇಡಲಾಗಿತ್ತು.

“ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, [ನಾವು] ನಿಮ್ಮ ಶ್ರಮದ ವೇತನವನ್ನು ಹಿಂತಿರುಗಿಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿತ್ತು. ಇದನ್ನು ನೋಡಿದ ಮಣಿಕಂಠನ್‌ ಅವರ ಕುಟುಂಬ ಶಾಕ್‌ ಆಗಿದೆ.

ಚಿನ್ನಾಭರಣ ಮತ್ತು ನಗದು ಇನ್ನೂ ನಾಪತ್ತೆಯಾಗಿದೆ. ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.

Advertisement

ಮಣಿಕಂದನ್ ಮತ್ತು ಅವರ ಕುಟುಂಬ ಸದಸ್ಯರು ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ಅವರ ಮುದ್ದಿನ ಸಾಕು ನಾಯಿ ಉಸಿಲಂಪಟ್ಟಿ ನಿವಾಸದಲ್ಲಿದ್ದು, ನಾಯಿಗೆ ಪ್ರತಿದಿನ ಅವರ ಇಬ್ಬರು ಸ್ನೇಹಿತರು ಆಹಾರ ನೀಡುತ್ತಾರೆ. ಆಹಾರದ ಸಮಯದಲ್ಲಿ, ಅವರ ಸ್ನೇಹಿತರು ಮನೆಯ ಬಾಗಿಲು ತೆರೆದಿರುವುದನ್ನು ನೋಡಿದಾದ ದರೋಡೆ ಆಗಿರುವ ಘಟನೆ ಬೆಳಕಿಗೆ ಬಂದಿದೆ.

‘ಕಾಕ ಮುಟೈ’ ಮೂಲಕ ಮಿಂಚಿದ ಮಣಿಕಂಠನ್‌ ‘ಕಡೈಸಿ ವಿವಸಾಯಿ’ ಸಿನಿಮಾಕ್ಕಾಗಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next