Advertisement

ಅಪಾಯ ಆಹ್ವಾನಿಸುತ್ತಿರುವ ರಸ್ತೆ ಬದಿಯ ಹೊಂಡ

01:48 AM Jul 02, 2020 | Sriram |

ಕುಂದಾಪುರ: ಯಡಮೊಗೆ – ಹಳ್ಳಿಹೊಳೆಯನ್ನು ಸಂಪರ್ಕಿಸುವ ಹೊಸಬಾಳು ಸೇತುವೆಗಿಂತ ಸ್ವಲ್ಪ ದೂರದಲ್ಲಿ ರಸ್ತೆ ಬದಿಯೇ ಒಂದು ದೊಡ್ಡ ಹೊಂಡವಿದ್ದು, ಅದು ಯಾವುದೇ ತಡೆ ಬೇಲಿ ಅಥವಾ ಸುರಕ್ಷತಾ ಕ್ರಮಗಳಿಲ್ಲದೆ ಅಪಾಯವನ್ನು ಆಹ್ವಾನಿಸುವಂತಿದೆ.

Advertisement

ಯಡಮೊಗೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಈ ಹೊಂಡವು ರಸ್ತೆ ಬದಿಯೇ ಇರುವುದರಿಂದ ತಡೆ ಗೋಡೆ ಅಥವಾ ತಾತ್ಕಾಲಿಕವಾಗಿ ತಡೆಬೇಲಿ ಯನ್ನಾದರೂ ಅಳವಡಿಸ ಬೇಕು.

ಈಗ ಮಳೆಗಾಲದಲ್ಲಿ ನೀರು ನಿಂತು ಮದಗದಂತೆ ಕಾಣುತ್ತಿದೆ.

ಸದ್ಯ ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದು, ಈಗಲೇ ಅಲ್ಲಿಗೆ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡರೆ ಸೂಕ್ತ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next