Advertisement

ರಸ್ತೆ ಕಾಮಗಾರಿಗೆ ಸಚಿವರಿಂದ ಚಾಲನೆ

06:03 PM Oct 20, 2019 | Team Udayavani |

ಹುಳಿಯಾರು: ಹುಳಿಯಾರಿನಿಂದ ಅಣೆಕಟ್ಟೆಯವರೆಗಿನ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಹುಳಿಯಾರು ಮತ್ತು ಹಂದನಕೆರೆ ಹೋಬಳಿಯ ಅನೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದರಿಂದ ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಚುನಾವಣಾ ಪ್ರಚಾರದ ಸಂದರ್ಭ ರಸ್ತೆ ಅಭಿವೃದ್ಧಿಪಡಿಸುವ ಆಶ್ವಾಸನೆ ನೀಡಿದ್ದ ಸಚಿವರು ಎಸ್‌ಎಚ್‌ಡಿಪಿ ಯೋಜನಯಡಿ ಈ ರಸ್ತೆಗೆ 19 ಕೋಟಿ ರೂ. ಮಂಜೂರು ಮಾಡಿಸಿದ್ದರು.

ಸಚಿವರು ಮಾತನಾಡಿ, ಚಿ.ನಾಹಳ್ಳಿ ತಾಲೂಕಿನ ರಸ್ತೆ ಕಾಮಗಾರಿಗೆ 72 ಕೋಟಿ ರೂ. ಮಂಜೂರು ಮಾಡಿಸಿದ್ದು, ಪಿಡಬ್ಲ್ಯುಡಿ ಇಲಾಖೆಯಿಂದ ತುರ್ತು ಅಗತ್ಯವಿರುವ ಹದಗೆಟ್ಟ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿ ಸ್ವಾಮಿ, ತಾಪಂ ಸದಸ್ಯ ಕೇಶವಮೂರ್ತಿ, ಮಾಜಿ ಸದಸ್ಯ ನಿರಂಜನ ಮೂರ್ತಿ, ಎಇಇ ಚಂದ್ರಶೇಖರ್‌, ಗುತ್ತಿಗೆದಾರ ರಘುಪತಿ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next