Advertisement

ಜೆಡಿಎಸ್‌ ಬೆಂಬಲಿಗರಿಂದ ರೋಡ್‌ ಶೋ

02:59 PM May 08, 2018 | Team Udayavani |

ಬನ್ನೂರು: ತೆನೆಹೊತ್ತ ಮಹಿಳೆಗೆ ಮತ ಹಾಕುವ ಮೂಲಕ ಜೆಡಿಎಸ್‌ ಬೆಂಬಲಿಸಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸೋಮವಾರ ಜೆಡಿಎಸ್‌ ಬೆಂಬಲಿಗರು ವಿವಿಧ ರಸ್ತೆಯಲ್ಲಿ ರೋಡ್‌ ಶೋ ಮಾಡುವ ಮೂಲಕ ಜನರ ಗಮನ ಸೆಳೆದರು.

Advertisement

ಅಪಾರ ಸಂಖ್ಯೆಯಲ್ಲಿ ಒಂದೆಡೆ ಜಮಾಯಿಸಿದ ಜೆಡಿಎಸ್‌ ಕಾರ್ಯಕರ್ತರು, ಬನ್ನೂರು ಬಸ್‌ ನಿಲ್ದಾಣದಿಂದ ಸಾಗಿ ತೇರಿನ ಬೀದಿ, ದೊಡ್ಡಂಗಡಿ ಬೀದಿ, ವಿಶ್ವೇಶ್ವರಯ್ಯ ವೃತ್ತ, ಎಸ್‌ಆರ್‌ಪಿ ರಸ್ತೆ, ಎಂ.ಎಂ.ರಸ್ತೆ , ಕೆಇಬಿ ಕಾಲೋನಿ, ದಾಯಿರಾ ಮೊಹಲ್ಲಾ, ಸುಭಾಷ್‌ ನಗರ, ಅಂಬೇಡ್ಕರ್‌ ಮೊಹಲ್ಲಾ,

ಮಾರ್ಕೆಟ್‌ ರಸ್ತೆ, ಕಾವೇರಿ ವೃತ್ತ, ತ್ಯಾಗರಾಜ ಮೊಹಲ್ಲಾಗಳಲ್ಲಿ ಜೆಡಿಎಸ್‌ ಪರವಾಗಿ ಘೋಷಣೆ ಕೂಗುತ್ತಾ ಸಾಗಿ, ತಮ್ಮ ಬಂದುಗಳು ಮತ್ತು ಸಾರ್ವಜನಿಕರಿಗೆ ಜೆಡಿಎಸ್‌ಗೆ ಮತ ಹಾಕುವಂತೆ ವಿನಂತಿ ಮಾಡುತ್ತಾ ಸಾಗಿದರು.

ಸ್ವಯಂ ಪ್ರೇರಿತರಾಗಿ ಸೇರಿ ಎಲ್ಲರೂ ಒಗ್ಗಟ್ಟಿನಿಂದ ಹೆಜ್ಜೆ ಹಾಕುವ ಮೂಲಕ 20 ತಿಂಗಳ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತ ವೈಖರಿಯನ್ನು ಜನರಿಗೆ ತಿಳಿಸುತ್ತಾ,  ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೋಗೆಯಲು ಹಾಗೂ ಸ್ಥಿರ ಪ್ರಾದೇಶಿಕ ಸರ್ಕಾರ ಅಸ್ಥಿತ್ವಕ್ಕೆ ತರಲು ನಮ್ಮ ಯುವ ನಾಯಕ ಎಂ.ಅಶ್ವಿ‌ನ್‌ಕುಮಾರ್‌ರನ್ನು ಅತಿ ಹೆಚ್ಚು ಮತ ನೀಡಿ ಗೆಲ್ಲಿಸೋಣ ಎಂದರು.

ಜೆಡಿಎಸ್‌ ಅಭ್ಯರ್ಥಿಯನ್ನು ಈ ಭಾಗದ ಶಾಸಕರಾಗಿ ಮಾಡಲು ನಾವೇಲ್ಲರು ಒಕ್ಕೊರಲಿನಿಂದ  ಶ್ರಮಿಸೋಣ ಎಂದು ಯುವಕರಲ್ಲಿ ಹುಮ್ಮಸ್ಸು ತುಂಬುತ್ತಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಕಾರ್ಯಕರ್ತರು, ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next