Advertisement

Road Mishap ವಗ್ಗ: ಕಾರು-ಆಟೋ ರಿಕ್ಷಾ ಢಿಕ್ಕಿ; ಓರ್ವ ಸಾವು

11:07 PM Sep 23, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪ ಕಾರು ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

Advertisement

ಜಕ್ರಿಬೆಟ್ಟು ಸಮೀಪದ ಮಡ್ಯಾರ್‌ ನಿವಾಸಿ, ಆಟೋ ಚಾಲಕ ವಿನಾಯಕ ಪೈ(58) ಮೃತರು. ಕಾರು ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದು, ವಿನಾಯಕ ಪೈ ಅವರು ತಮ್ಮ ಕೆಲಸದವರಿಗೆ ಬೆಳಗ್ಗಿನ ಉಪಾಹಾರ ತರುವುದಕ್ಕೆ ಹೊಟೇಲಿಗೆ ಆಗಮಿಸಿದ್ದರು ಎನ್ನಲಾಗಿದೆ.

ಢಿಕ್ಕಿಯಾದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೈ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ದಾರಿ ಮಧ್ಯೆ ಮೃತಪಟ್ಟರು. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವಿನಾಯಕ ಪೈ ಅವರು ಪ್ರಸ್ತುತ ಸಣ್ಣಪುಟ್ಟ ವ್ಯವಹಾರ ನಡೆಸುತ್ತಿದ್ದು, ಈ ಹಿಂದೆ ಕಕ್ಯಪದವಿನಲ್ಲಿ ನೆಲೆಸಿದ್ದು ಪತ್ರಿಕಾ ಏಜೆನ್ಸಿ ನಡೆಸುತ್ತಿದ್ದರು. ಜತೆಗೆ ಉಳಿ ಗ್ರಾಮದ ಬೋಳ್ಯ ಶ್ರೀ ಬಬ್ಬರ್ಯ ದೈವಸ್ಥಾನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next