Advertisement

Road Mishap ಉಪ್ಪಿನಂಗಡಿ: ಬೈಕ್‌ – ಪಿಕಪ್‌ ಢಿಕ್ಕಿ: ಬೈಕ್‌ ಸವಾರ ಸಾವು

01:14 AM Jul 13, 2024 | Team Udayavani |

ಉಪ್ಪಿನಂಗಡಿ: ಬೈಕ್‌ ಹಾಗೂ ಪಿಕಪ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್‌ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜು. 12ರಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ಸಂಭವಿಸಿದೆ.

Advertisement

ಮಂಗಳೂರು ಕೋಡಿಕ್ಕಲ್‌ ನಿವಾಸಿ ಉಮೇಶ್‌ ಕೆ. ಅವರ ಪುತ್ರ ಪ್ರಣಮ್‌ ಕೋಟ್ಯಾನ್‌ (23) ಮೃತಪಟ್ಟವರು. ಇವರು ಮೆಡಿಕಲ್‌ ರೆಪ್‌ ಆಗಿದ್ದರು.

ಗುಂಡ್ಯ: ಲಾರಿಗಳು ಢಿಕ್ಕಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗುಂಡ್ಯದಲ್ಲಿ ಎರಡು ಲಾರಿಗಳು ಪರಸ್ಪರ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಭವಿಸಿದೆ. ಚಾಲಕರಿಬ್ಬರೂ ಅಪಾಯ ದಿಂದ ಪಾರಾಗಿದ್ದಾರೆ. ರಾತ್ರಿ ವೇಳೆ ವಾಹಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಕೆಲ ಸಮಯ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

347 ಬ್ಯಾಗ್‌ ಮೈಲ್‌ತುತ್ತು ವಶ
ಸುಳ್ಯ: ಅಕ್ರಮವಾಗಿ ದಾಸ್ತಾನು ಇರಿಸಿದ್ದ 347 ಬ್ಯಾಗ್‌ ಮೈಲ್‌ ತುತ್ತನ್ನು ಕನಕಮಜಲು ಗ್ರಾಮದ ಸುಣ್ಣಮೂಲೆಯಿಂದ ಕೃಷಿ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡರು.

ಖಚಿತ ಮಾಹಿತಿ ಮೇರೆಗೆ ಸುಳ್ಯದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್‌ ಹಾಗೂ ಜಾರಿದಳದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಅವರ ಜಿಲ್ಲಾ ತಂಡ ದಾಳಿ ನಡೆಸಿದಾಗ ಪರವಾನಿಗೆ ಇಲ್ಲದೆ ಸಂಗ್ರಹಿಸಿದ್ದ ಮೈಲ್‌ತುತ್ತು ಪತ್ತೆಯಾಗಿದೆ.

Advertisement

ಕೇರಳ ಮೂಲದ ಸಜಿ ಹಾಗೂ ಸುರೇಶ್‌ ಕುಮಾರ್‌ ಇದನ್ನು ದಾಸ್ತಾನು ಇರಿಸಿದ್ದಾರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next