Advertisement

Road Mishap ಉಳ್ಳಾಲ: ರಿಕ್ಷಾ ಚಾಲಕ ಸಾವು

11:55 PM Aug 14, 2024 | Team Udayavani |

ಉಳ್ಳಾಲ: ಕೋಟೆಕಾರು ರಿಕ್ಷಾ ನಿಲ್ದಾಣ ಬಳಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಅಬ್ದುಲ್‌ ಅಝೀಝ್ (54) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Advertisement

ಇವರು ಸೋಮೇಶ್ವರ ಕಡೆ ಯಿಂದ ಕೋಟೆಕಾರಿಗೆ ಅತಿ ವೇಗ ದಲ್ಲಿ ರಿಕ್ಷಾ ಚಲಾಯಿಸಿಕೊಂಡು ಬಂದ ಪರಿಣಾಮ ಆಟೋದಿಂದ ಹೊರಗೆಸೆಯಲ್ಪಟ್ಟಿದ್ದರು.

ರಿಕ್ಷಾ ಮುಂದೆ ಚಲಿಸಿ ಅಲ್ಲಿ ನಿಲ್ಲಿಸಿದ್ದ ಮತ್ತೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು. ಅಝೀಝ್ರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next