Advertisement

Road Mishap ಲಾರಿ-ಬೈಕ್‌ ಢಿಕ್ಕಿ; ಸವಾರರಿಗೆ ಗಾಯ

12:26 AM Nov 26, 2023 | Team Udayavani |

ಬಂಟ್ವಾಳ: ಬಂಟ್ವಾಳ ಬೈಪಾಸ್‌ ಜಂಕ್ಷನ್‌ನಲ್ಲಿ ಲಾರಿ ಹಾಗೂ ಬೈಕ್‌ ಢಿಕ್ಕಿ ಹೊಡೆದುಕೊಂಡು ಸವಾರರು ಗಾಯಗೊಂಡ ಘಟನೆ ನ. 24ರಂದು ನಡೆದಿದೆ.

Advertisement

ಘಟನೆಯಲ್ಲಿ ಸವಾರ ಬಂಟ್ವಾಳ ನಿವಾಸಿ ಸುಜನ್‌ ಹಾಗೂ ಸಹಸವಾರ ಕಿರಣ್‌ರಾಜ್‌ ಗಾಯಗೊಂಡಿದ್ದಾರೆ. ಕಿರಣ್‌ರಾಜ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಚಾಲಕ ಗೋಪಾಲ ಸಪಲ್ಯ ಅವರು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next