Advertisement

Road mishap: ಸರಣಿ ಅಪಘಾತ: ಬೈಕ್‌ನಲ್ಲಿದ್ದ ತಾಯಿ-ಮಗ ದುರ್ಮರಣ

06:04 PM Oct 27, 2023 | Team Udayavani |

ಬೆಂಗಳೂರು: ನಾಲ್ಕು ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆಂಧ್ರಪ್ರದೇಶ ಮೂಲದ ನರೇಶ್‌ ಎಂಬುವರ ಪತ್ನಿ ಅಶ್ವಿ‌ನಿ (29) ಮತ್ತು ಅವರ ಪುತ್ರ ಯಶ್ವಿ‌ನ್‌(7) ಮೃತ ದುರ್ದೈವಿಗಳು. ಘಟನೆಯಲ್ಲಿ ಬೈಕ್‌ ಚಾಲಕ ನರೇಶ್‌, ಆಟೋ ಚಾಲಕ, ಪ್ರಯಾಣಿಕರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ನರೇಶ್‌ ನಗರದಲ್ಲಿ ಗುತ್ತಿಗೆದಾರರಾಗಿದ್ದು, ಈ ಮೊದಲು ಹೂಡಿಯಲ್ಲಿ ವಾಸವಾಗಿದ್ದರು. ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶಕ್ಕೆ ಸ್ಥಳಾಂತರವಾಗಿದ್ದರು. ಆದರೂ ನಗರದಲ್ಲಿ ಸಣ್ಣ-ಪುಟ್ಟ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದರು. ಅ.24ರಂದು ವಿಜಯದಶಮಿ ಪ್ರಯುಕ್ತ ನರೇಶ್‌, ಪತ್ನಿ ಮತ್ತು ಪುತ್ರನ ಜತೆ ಬೈಕ್‌ನಲ್ಲಿ ಆಂಧ್ರಪ್ರದೇಶದಿಂದ ಕೆ.ಜಿ.ಹಳ್ಳಿಯಲ್ಲಿರುವ ಮಾವನ ಮನೆಗೆ ಬರುತ್ತಿದ್ದರು.

ಇದೇ ವೇಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಹುಳಿಮಾವು ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ನಿಂತಿತ್ತು. ಈ ವೇಳೆ ಅತೀ ವೇಗವಾಗಿ ಬಂದ ಆಟೋ ಚಾಲಕ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ನರೇಶ್‌ ಆಟೋಕ್ಕೆ ಡಿಕ್ಕಿ ಹೊಡೆದಿದ್ದರು.

ಮತ್ತೂಂದೆಡೆ ಅತೀವೇಗವಾಗಿ ಬಂದ ಟಾಟಾ ಏಸ್‌ ಚಾಲಕ ನಿಯಂತ್ರಣ ತಪ್ಪಿ ನರೇಶ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪತ್ನಿ ಅಶ್ವಿ‌ನಿ ಮತ್ತು ಪುತ್ರ ಯಶ್ವಿ‌ನ್‌ ಕೆಳಗೆ ಬಿದ್ದು, ತಲೆಗೆ ಪೆಟ್ಟು ಬಿದ್ದಿದ್ದೆ. ತೀವ್ರ ರಕ್ತಸ್ರಾವವಾಗಿ ತಾಯಿ-ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next