Advertisement

Road mishap: ರಸ್ತೆ ಬದಿ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದ ಬೈಕ್‌ ಸವಾರ ಸಾವು

11:42 AM Jan 09, 2024 | Team Udayavani |

ಬೆಂಗಳೂರು: ಸ್ನೇಹಿತನ ಜತೆ ಹೋಗುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದುಕೊಂಡು ಬೈಕ್‌ ಸವಾರ ಮೃತಪಟ್ಟಿರುವ ಘಟನೆ ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತೆಲಂಗಾಣ ಮೂಲದ ವಾಸುದೇವ ಆಚಾರ್ಯ(32) ಮೃತರು. ಘಟನೆಯಲ್ಲಿ ಹಿಂಬದಿ ಸವಾರ ಮೊಹಮ್ಮದ್‌ ಅಬ್ದುಲ್ಲಾ ಎಂಬವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಸೋಮವಾರ ಬೆಳಗ್ಗೆ 7ಗಂಟೆ ಸುಮಾ ರಿಗೆ ವಾಸುದೇವ ಆಚಾರ್ಯ, ಮೊಹ ಮ್ಮದ್‌ ಅಬ್ದುಲ್ಲಾರನ್ನು ಬೈಕ್‌ನಲ್ಲಿ ಕೂರಿಸಿ ಕೊಂಡು ಬೆಂಗಳೂರು ಕಡೆಯಿಂದ ನಂದಿಬೆಟ್ಟದ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬಿಬಿ ರಸ್ತೆಯ ಬೈಪಾಸ್‌ ಸಮೀಪದ ರೈಲ್ವೇ ಸ್ಟೇಷನ್‌ ಬಳಿಯ ಮುಖ್ಯರಸ್ತೆ ಯಲ್ಲಿ ತನ್ನ ವಾಹನ ನಿಯಂತ್ರಿಸಲಾಗದೆ ರಸ್ತೆ ಪಕ್ಕದಲ್ಲಿದ್ದ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದುಕೊಂಡು, ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ವಾಸುದೇವ ಆಚಾರ್ಯ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next