Advertisement

ಸಂತೆಕಟ್ಟೆ: ಜೀಪ್ ಢಿಕ್ಕಿ; ಪಾದಚಾರಿ ಸಾವು

10:39 PM Dec 09, 2022 | Team Udayavani |

ಉಡುಪಿ: ಸಂತೆಕಟ್ಟೆ, ಪುತ್ತೂರು ಎಲ್‌ವಿಟಿ ಸಮೀಪ ರಸ್ತೆ ಬದಿಯಲ್ಲಿ ಡಿ.8ರಂದು ರಾತ್ರಿ 7.45ಕ್ಕೆ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ನಿವಾಸಿ ರಾಮಚಂದ್ರ (57) ಅವರಿಗೆ ಬ್ರಹ್ಮಾವರದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಜೀಪು ಚಾಲಕ ಢಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಅವರು ರಸ್ತೆಗೆ ಬಿದ್ದರು.

Advertisement

ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಚಿನ್ನಾಭರಣ ಕಳವು
ಉಡುಪಿ: ಪುತ್ತೂರು ಎಲ್‌ವಿಟಿ ದೇವಸ್ಥಾನದ ಬಳಿಯ ಪೂಜಾ ಸಾಲ್ಯಾನ್‌ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಡಿ.8ರಂದು ಮನೆ ಬಾಗಿಲಿನ ಬೀಗ ಮುರಿದು ಬೆಡ್‌ ರೂಮ್‌ನಲ್ಲಿದ್ದ 16 ಗ್ರಾಂ ಚಿನ್ನದ ಬಳೆ, 4 ಗ್ರಾಂ ತೂಕದ ಚಿನ್ನದ ಪೆಂಡೆಂಟ್‌ ಸಹಿತ ಒಟ್ಟು 20 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 96 ಸಾವಿರ ರೂ., ಆಗಿದೆ ಎಂದು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next