Advertisement

Road Mishap ಹಾಸನ; ಪ್ರತ್ಯೇಕ ಅಪಘಾತ: 6 ಮಂದಿ ಸಾವು

11:35 PM Apr 08, 2024 | Team Udayavani |

ಹಾಸನ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ದಂಪತಿ ಸಹಿತ 6 ಮಂದಿ ಮೃತಪಟ್ಟಿದ್ದಾರೆ.

Advertisement

ಹೊಳೆನರಸೀಪುರ ಸಮೀಪ ಮೈಸೂರು ರಸ್ತೆ, ಹಳ್ಳಿಮೈಸೂರು ಕ್ರಾಸ್‌ನಲ್ಲಿ ರವಿವಾರ ರಾತ್ರಿ ಬೈಕ್‌ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದರಿಂದ ಹಳ್ಳಿಮೈಸೂರು ಹೋಬಳಿ, ಬೇಡಿಗನಹಳ್ಳಿ ಗ್ರಾಮದ ರಾಮೇಗೌಡ (55), ಅವರ ಪತ್ನಿ ಭಾಗ್ಯಮ್ಮ ಮತ್ತು ನಂಜಮ್ಮ (65) ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಸೋಗೂರು ಗ್ರಾಮದ ಗಿರೀಶ (28) ಅವರು ರವಿವಾರ ಸಂಜೆ ಹಿರೀಸಾವೆ – ನುಗ್ಗೇಹಳ್ಳಿ ರಸ್ತೆಯಲ್ಲಿ ಬೈಕಿನಲ್ಲಿ ಧರ್ಮಯ್ಯ ಅವರ ತೋಟದ ಮನೆಗೆ ಬರುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಟಾಟಾ ಏಸ್‌ ಢಿಕ್ಕಿ ಹೊಡೆದು ಬೈಕ್‌ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಹೊಳೆನರಸೀಪುರ ತಾಲೂಕು ಅಗ್ರಹಾರ ಗೇಟ್‌ ಬಳಿ ರವಿವಾರ ರಾತ್ರಿ ಸಂಭವಿಸಿದೆ.

ಹೊಳೆನರಸೀಪುರ ತಾಲೂಕು, ಹಳೆಕೋಟೆ ಹೋಬಳಿ ಕೋಡಿಹಳ್ಳಿ ಕೊಪ್ಪಲು ಗ್ರಾಮದ ರತೀಶ ಅಲಿಯಾಸ್‌ ಅಪ್ಪು (17) ಹಾಗೂ ಕುಮಾರ (19) ಮೃತಪಟ್ಟವರು.

Advertisement

ಹಾಸನ ನಗರದ ಚನ್ನಪಟ್ಟಣ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್‌ನಲ್ಲಿ ಪೆಟ್ರೋಲ್‌ ಬಂಕ್‌ ಸಮೀಪದ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ, ಬೇಕರಿ ಕಾರ್ಮಿಕ, ಬೇಲೂರು ತಾಲೂಕು ಮಾಳಗೆರೆ ಗ್ರಾಮದ ಮಹೇಶ ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗಿನ ಜಾವ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next