Advertisement

Road Mishap: ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ದುರ್ಮರಣ

03:15 PM Dec 07, 2023 | Team Udayavani |

ಸಿಂಧನೂರು: ಲಾರಿ ಹಾಗೂ ಟಾಟಾ ಏಸ್ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಪಗಡದನ್ನಿ ಕ್ಯಾಂಪಿನ ಬಳಿ ಡಿ.7ರ ಗುರುವಾರ ನಡೆದಿದೆ.

Advertisement

ಸಿಂಧನೂರಿನ ಎಂ.ಡಿ.ಇಸ್ಮಾಯಿಲ್ (25), ಮಸ್ಕಿ ತಾಲೂಕಿನ ಬುಕ್ಕನಹಟ್ಟಿ ಗ್ರಾಮದ ರವಿ ರಾಜಪ್ಪ (22), ಮಸ್ಕಿ ತಾಲೂಕಿನ ಚನ್ನಬಸಪ್ಪ (26), ಅಮರೇಶ ( 25) ಮೃತಪಟ್ಟವರು.  ಸಮೀರ್  (25) ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಮದುವೆ ಸಮಾರಂಭದ ಅಲಂಕಾರಕ್ಕೆ ಬಳಸುವ ಡೆಕೋರೇಶನ್ ಸಾಮಾಗ್ರಿ ಸಾಗಿಸುತ್ತಿದ್ದ ಟಾಟಾ ಏಸ್  ಲಾರಿಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್ .ತಳವಾರ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ ಭೇಟಿ ನೀಡಿದ್ದು, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next