Advertisement

Road Mishap; ಕಾರು ಢಿಕ್ಕಿಯಾಗಿ ತಂದೆ- ಮಗನಿಗೆ ಗಾಯ

12:17 AM Feb 20, 2024 | Team Udayavani |

ಪುಂಜಾಲಕಟ್ಟೆ: ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರರಾದ ತಂದೆ-ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಿಲಿಮೊಗರು ಗ್ರಾಮದ ಓಮ ಸಂಕದ ಬಳಿ ರವಿವಾರ ಸಂಭವಿಸಿದೆ.

Advertisement

ಸ್ಥಳೀಯ ನಿವಾಸಿ ಕೇಶವ ಸಪಲ್ಯ ಹಾಗೂ ಅವರ ಪುತ್ರ ಯಶ್ಮಿತ್‌ ಗಾಯಗೊಂಡವರು. ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಓಮ ಕಿರು ಸೇತುವೆ ಬಳಿ ಜಯಪ್ರಕಾಶ್‌ ಅವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಯಶ್ಮಿತ್‌ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಬೈಕ್‌ ಕಳವು
ಬಂಟ್ವಾಳ: ಫರಂಗಿಪೇಟೆ ಶ್ರೀ ವರದೇಶ್ವರ ದೇವಸ್ಥಾನದ ಜಾತ್ರೆಗೆ ಹೋಗಿದ್ದ ಫರಂಗಿಪೇಟೆ ತೆಕ್ಕಿಹಿತ್ಲು ನಿವಾಸಿ ಚಂದ್ರಶೇಖರ ಅವರು ರಸ್ತೆ ಬದಿ ನಿಲ್ಲಿಸಿದ್ದ 15 ಸಾವಿರ ರೂ. ಮೌಲ್ಯದ ಬೈಕನ್ನು ಯಾರೋ ಕಳವು ಮಾಡಿದ ಘಟನೆ ಫೆ. 15ರಂದು ನಡೆದಿದೆ.

ಸುಳ್ಯ: ದ್ವಿಚಕ್ರ ವಾಹನಗಳು ಢಿಕ್ಕಿ
ಸುಳ್ಯ: ನಗರದ ಜೂನಿಯರ್‌ ಕಾಲೇಜು ಯುವಜನ ಸಂಯುಕ್ತ ಮಂಡಳಿಯ ಸಮೀಪ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿಯಾಗಿ ಇಬ್ಬರೂ ಸವಾರರು ಗಾಯಗೊಂಡಿದ್ದಾರೆ. ಬೈಕುಗಳು ಜಖಂಗೊಂಡಿವೆ. ಗಾಯಳುಗಳಿಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next