Advertisement

Road Mishap ಕಾರುಗಳ ಢಿಕ್ಕಿ: ಒಂದೇ ಕುಟುಂಬದ ಮೂವರು ಸೇರಿ ಐವರ ಸಾವು

10:32 PM Sep 08, 2024 | Team Udayavani |

ಮಧುಗಿರಿ (ತುಮಕೂರು): ಎರಡು ಕಾರುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ಐವರು ಮೃತಪಟ್ಟು, ಐದು ಜನ ಗಾಯಗೊಂಡಿರುವ ಘಟನೆ ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ-ಮಧುಗಿರಿ ಗಡಿಭಾಗದ ಕಾಟಗಾನಹಟ್ಟಿಯ ಬಳಿ ರವಿವಾರ ಸಂಜೆ ಜರಗಿದೆ.

Advertisement

ಒಂದು ಕಾರಿನಲ್ಲಿದ್ದ ಪಾವಗಡ ಎತ್ತಿನಹಳ್ಳಿಯ ಜನಾರ್ದನ ರೆಡ್ಡಿ (63), ಅವರ ಪುತ್ರಿ ಸಿಂಧೂ (25), ಸಿಂಧೂ ಪುತ್ರ ಅಂಶು (8) ಹಾಗೂಮತ್ತೊಂದು ಕಾರಿನ ಚಾಲಕ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ನಾಗರಾಜು (27), ಸಿದ್ದಗಂಗಪ್ಪ (45) ಮೃತಪಟ್ಟವರು.

ಮೃತ ಜನಾರ್ದನ ರೆಡ್ಡಿ ಸಂಬಂಧಿ ಗೀತಾ ಅವರ ಕಾಲು ಮುರಿತ, ಕಣ್ಣಿನ ಬಳಿ ಗಾಯವಾಗಿದ್ದು ಗೀತಾ ಅವರ ಪುತ್ರ ಯೋಧ (8) ಹಾಗೂ ಕಾರು ಚಾಲಕ ಆನಂದ್‌ ಅವರ ಕಾಲು ಮುರಿದಿದೆ. ಮೃತ ಸಿಂಧೂ ಅವರ ಒಂದು ವರ್ಷದ ಮಗುವಿಗೆ ಹಣೆಗೆ ಗಾಯಗಳಾಗಿವೆ.

ಪಾವಗಡದ ಎತ್ತಿನಹಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿನಿಂದ ಬರುತ್ತಿದ್ದ ಮತ್ತೂಂದು ಕಾರಿನ ನಡುವೆ ಮಧುಗಿರಿ ಗಡಿಯ ಕಾಟಗಾನಹಳ್ಳಿಯ ಬಳಿ ಢಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿಯೇ ಸಿಂಧೂ ಸೇರಿ ನಾಲ್ವರು ಮೃತಪಟ್ಟರೆ, ಸಿಂಧೂ ಪುತ್ರ ಅಂಶು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಮಧುಗಿರಿ ಎಎಸೈಗಳಾದ ಹನುಮಂತರಾಪ್ಪ, ಶಿವಣ್ಣ ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

Advertisement

ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಾಪ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದು ಐದು ಜನ ಪ್ರಯಾಣಿಕರು ಅಸುನೀಗಿರುವುದಕ್ಕೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ತುಮಕೂರು ಸಂಸದ ವಿ.ಸೋಮಣ್ಣನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next