Advertisement

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

01:08 AM Sep 24, 2024 | Team Udayavani |

ದೇವನಹಳ್ಳಿ : ತಾಲೂಕಿನ ಕೊಯಿರ ಗ್ರಾಮದ ಪೆಟ್ರೋಲ್ ಬಂಕ್‌ ಎದುರು ರಸ್ತೆ ದಾಟುತ್ತಿದ್ದ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

Advertisement

ಚಿನ್ನಪ್ಪ (75) ಮೃತ ಪಾದಚಾರಿ. ಕೊಯಿರ ಗ್ರಾಮದ ಪೆಟ್ರೋಲ್ ಬಂಕ್‌ ಎದುರು ರಸ್ತೆ ದಾಟುತ್ತಿದ್ದರು.

ಈ ವೇಳೆ ಕೊಯಿರ-ಮಾರಸಂದ್ರ ಮಾರ್ಗವಾಗಿ ದ್ವಿಚಕ್ರ ವಾಹನ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫ‌ಲಿಸದೆ, ಕೊನೆಯುಸಿರೆಳೆದಿದ್ದಾರೆ. ಅಪಘಾತ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next