Advertisement

Road Mishap: ಜಾರಿಗೆಬೈಲು: ಕಾರು ಪಲ್ಟಿ , ಚಾಲಕ ಗಂಭೀರ

12:06 PM Mar 16, 2024 | Team Udayavani |

ಬೆಳ್ತಂಗಡಿ: ಗುರುವಾಯನ ಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಕ್ಕದ ಚರಂಡಿಗೆ ಬಿದ್ದು ಪಕ್ಕದ ತೋಟಕ್ಕೆ ನುಗ್ಗಿದ ಘಟನೆ ಮಾ. 15ರಂದು ಸಂಜೆ ನಡೆಯಿತು.

Advertisement

ಉಡುಪಿ ಮೂಲದ ವ್ಯಾಪಾರಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾ ಣಿಸುತ್ತಿದ್ದರು. ಕಾರಿನಲ್ಲಿ ಚಾಲಕ ಮಾತ್ರ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಾಲಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು 108 ಆಸ್ಪತ್ರೆಗೆ ದಾಖಲಿಸಿದರು.

ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ಚರಂಡಿಗೆ ಬಿದ್ದು 3 ಬಾರಿ ಪಲ್ಟಿ ಹೊಡೆದು ಪಕ್ಕದ ಮನೆ ಪರಿಸರದಲ್ಲಿ ತೋಟಕ್ಕೆ ನುಗ್ಗಿ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next