Advertisement

Road Mishap ಆಟೋ ರಿಕ್ಷಾ-ಬೈಕ್‌ ಢಿಕ್ಕಿ: ಸವಾರ ಗಾಯ

09:46 PM Oct 29, 2023 | Team Udayavani |

ಬಂಟ್ವಾಳ: ಮೇರಮಜಲು ಗ್ರಾಮದ ಮಯ್ಯಡಿಯಲ್ಲಿ ಬೈಕ್‌ ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಅ. 27ರಂದು ನಡೆದಿದೆ.

Advertisement

ಉಳಾಯಿಬೆಟ್ಟು ನಿವಾಸಿ ಬೈಕ್‌ ಸವಾರ ಜಿತೇಶ್‌ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಆಟೋ ರಿಕ್ಷಾ ಚಾಲಕ ಚಂದ್ರಹಾಸ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೂರಿ ಇರಿತ ಪ್ರಕರಣ: ಮೂವರ ಬಂಧನ
ಬಂಟ್ವಾಳ: ಶಾರದೋತ್ಸವದ ಹುಲಿವೇಷದ ಬ್ಯಾನರ್‌ ತೆರವು ಮಾಡುವ ವಿಚಾರವಾಗಿ ನಡೆದ ಜಗಳದಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಣೆಮಂಗಳೂರು ನಿವಾಸಿ ಶೋಧನ್‌, ನರಿಕೊಂಬು ನಿವಾಸಿ ಪ್ರಕಾಶ್‌ ಹಾಗೂ ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಿವಾಸಿ ಸಂದೀಪ್‌ ಪೊಲೀಸರಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next