Advertisement

High Court ತಡೆಯಾಜ್ಞೆ ಮೀರಿ ರಸ್ತೆ ಅಗಲೀಕರಣ ಕಾಮಗಾರಿ; ನಗರ ಠಾಣೆಗೆ ದೂರು

04:12 PM Aug 16, 2023 | Team Udayavani |

ಸಾಗರ: ಇಲ್ಲಿನ ಬಿಎಚ್ ರಸ್ತೆಯ ರಿಲೆಯನ್ಸ್ ಪೆಟ್ರೋಲ್ ಬಂಕ್‌ನಿಂದ ಪೊಲೀಸ್ ಸ್ಟೇಷನ್‌ವರೆಗೆ ರಸ್ತೆ ಅಗಲೀಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಇದ್ದಾಗಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಕದ್ದುಮುಚ್ಚಿ ಅಗಲೀಕರಣ ಕಾಮಗಾರಿ ನಡೆಸುತ್ತಿರುವುದರ ವಿರುದ್ಧ ನ್ಯಾಯವಾದಿ ನಾಗರಾಜ್ ಸಾಗರ ನಗರ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

Advertisement

ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ನಗರ ಠಾಣೆವರೆಗೆ ರಸ್ತೆ ಅಗಲೀಕರಣ ಮಾಡುವಾಗ ಎರಡೂ ಭಾಗದಲ್ಲೂ ಅಗಲೀಕರಣ ಮಾಡಬೇಕು. ಒಂದೇ ಭಾಗದಲ್ಲಿ ಅಗಲೀಕರಣ ಮಾಡುವುದರಿಂದ ಜ್ಯೂನಿಯರ್ ಕಾಲೇಜು, ತಹಶೀಲ್ದಾರ್ ಕಚೇರಿ, ನ್ಯಾಯಾಲಯ ಆವರಣ, ಪೊಲೀಸ್ ಸ್ಟೇಷನ್ ಜಾಗ ಹೆಚ್ಚು ರಸ್ತೆಗೆ ಹೋಗುತ್ತದೆ ಎಂಬ ಕುರಿತು ವಕೀಲರ ಸಂಘ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಎರಡೂ ಭಾಗದಲ್ಲೂ ಅಗಲೀಕರಣ ಕೈಗೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯವಾದಿ ಕೆ.ದಿವಾಕರ್ ಸೇರಿದಂತೆ ಸ್ಥಳೀಯ ವಕೀಲರು ಹೈಕೋರ್ಟ್‌ಗೆ ದಾವೆ ಸಲ್ಲಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶವಿದ್ದಾಗಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಯಾರಿಗೂ ಗೊತ್ತಾಗದಂತೆ ರಸ್ತೆಯ ಒಂದೇ ಭಾಗದಲ್ಲಿ ಅಗಲೀಕರಣ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಹಿಟಾಜಿ ತಂದು ಜ್ಯೂನಿಯರ್ ಕಾಲೇಜು ಮತ್ತು ತಹಶೀಲ್ದಾರ್ ಕಚೇರಿ ಬಳಿ ಅಗಲೀಕರಣ ಕಾಮಗಾರಿ ತರಾತುರಿಯಲ್ಲಿ ನಡೆಸಲಾಗುತ್ತಿದೆ. ತಕ್ಷಣ ಅಗಲೀಕರಣ ಕಾಮಗಾರಿ ನಿಲ್ಲಿಸಬೇಕು. ಸಂಬಂಧಪಟ್ಟ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು ಎಂದು ನಾಗರಾಜ್ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Central Cabinet Seat Offer…ಕಾಂಗ್ರೆಸ್ ಹೇಳಿಕೆಗೆ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next