Advertisement

Subramanya: ಪೈಪ್‌ ಅಳವಡಿಕೆಗೆ ರಸ್ತೆ ಅಗೆತ

02:59 PM Aug 06, 2024 | Team Udayavani |

ಸುಬ್ರಹ್ಮಣ್ಯ: ಬಹುಗ್ರಾಮ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಮಣ್ಣಿನ ರಸ್ತೆ ಬದಿ ಅಗೆತಮಾಡಿದ್ದು, ಇದರಿಂದ ರಸ್ತೆ ಕೆಸರಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಮಳೆ ಸಂದರ್ಭದಲ್ಲೇ ಕಾಮಗಾರಿ ನಡೆಸುತ್ತಿ ರುವುದಕ್ಕೆ ವಾಹನ ಸವಾರರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕಲ್ಲುಗುಡ್ಡೆ-ಕಡ್ಯ ಕೊಣಾಜೆ ಜಿಲ್ಲಾ ಪಂಚಾಯತ್‌ ರಸ್ತೆಯ ಕೊಣಾಜೆ ಸಮೀಪದ ತಲೆಕ್ಕಿ ಸಮೀಪ ಮಣ್ಣಿನ ರಸ್ತೆಯ ಬದಿಯಲ್ಲೇ ಕಾಮಗಾರಿ ನಡೆಯುತ್ತಿದೆ. ಪೈಪ್‌ಲೈನ್‌ನ ಹೊಂಡ ಮುಚ್ಚಿದರೂ ರಸ್ತೆ ಜಾರುತ್ತಿರುವುದರಿಂದ ಸಮಸ್ಯೆಗೆ ಕಾರಣವಾದವರಿಂದ ದುರಸ್ತಿ ಕಾರ್ಯ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ನಮ್ಮ ವ್ಯಾಪ್ತಿಯಲ್ಲಿ ಬರುತ್ತಿಲ್ಲ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಮ್ಮ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಇಲ್ಲಿ ಈಗ ಕಾಮಗಾರಿ ನಡೆಸಿ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಸಂಬಂಧಿಸಿದವರಲ್ಲಿ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಗುವುದು ಎಂದು ಕಡ್ಯ ಕೊಣಾಜೆ ಗ್ರಾ.ಪಂ. ಪಿಡಿಒ ಪದ್ಮನಾಭ ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next