Advertisement

6 ಕೋ.ರೂ. ವೆಚ್ಚದ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ

12:16 PM Apr 11, 2022 | Team Udayavani |

ಮೂಡಬಿದಿರೆ: ವಿದ್ಯಾಗಿರಿಯಿಂದ ಪೇಪರ್‌ಮಿಲ್‌ ತನಕ 6 ಕೋ. ರೂ. ಅನುದಾನದ ರಸ್ತೆ ಅಭಿವೃದ್ಧಿಗೆ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್‌ ರವಿವಾರ ಗುದ್ದಲಿಪೂಜೆ ನೆರವೇರಿಸಿದರು.

Advertisement

ಬೆಳೆಯುತ್ತಿರುವ ಮೂಡುಬಿದಿರೆಯಲ್ಲಿ ವಾಹನಗಳ ಓಡಾಟದ ಒತ್ತಡ ನಿವಾರಿಸಿ, ಜನತೆಗೆ ಸುಗಮ ಸಂಚಾರದ ಅನುಕೂಲತೆ ಒದಗಿಸಲು ವರ್ತುಲ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಹತ್ತಿರದ ಗ್ರಾಮಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಚೌಟರ ಅರಮನೆಯ ಕುಲದೀಪ ಎಂ., ಬಿಜೆಪಿ ದ.ಕ.ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ., ಪುರಸಭಾ ಉಪಾಧ್ಯಕ್ಷೆ ಸುಜಾತಾ, ಸದಸ್ಯರು, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ್‌ ಪೂಜಾರಿ, ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್‌ ಆಳ್ವ, ಹಿರಿಯ ವಕೀಲ ಎಂ.ಎಸ್‌. ಕೋಟ್ಯಾನ್‌, ಪಾರ್ಶ್ವನಾಥ ಬಲ್ಲಾಳ್‌, ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ., ಡಾ|ಹರೀಶ್‌ ನಾಯಕ್‌, ಡಾ| ಸದಾನಂದ ನಾಯಕ್‌, ಗೋಪಾಲ್‌ ಶೆಟ್ಟಿಗಾರ್‌, ಕೇಶವ ಕರ್ಕೇರ, ಊರಿನ ಗಣ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next