Advertisement

ರಸ್ತೆ ಕಾಮಗಾರಿ ಪರಿಶೀಲಿಸಿದ ಲೋಕಾಯುಕ್ತ ಎಸ್ಪಿ ಅನಿತಾ

05:16 PM Feb 22, 2022 | Shwetha M |

ವಿಜಯಪುರ: ವಿಜಯಪುರ ಕರ್ನಾಟಕ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ಡಿವೈಎಸ್ಪಿ ಅರುಣ ನಾಯಕ, ಇನ್ಸ್‌ಪೆಕ್ಟರ್‌ ಆನಂದ ಠಕ್ಕಣ್ಣವರ ಅವರಿದ್ದ ತಂಡ ಬಾರಖೇಡ್‌ ಬೀಳಗಿ ರಸ್ತೆ ಕಾಮಗಾರಿ ಪರಿಶೀಲಿಸಿದರು.

Advertisement

ಪರಿಶೀಲನಾ ಸ್ಥಳದಲ್ಲಿ ಹಾಜರಿದ್ದ ಸಿಂದಗಿ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ತಾರಾನಾಥ್‌ ಅವರಿಗೆ ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರು. ಅದರಂತೆ ಇಂಡಿ ತಾಲೂಕಿನಲ್ಲಿ ಬರುವ ಔರಾದ-ಸದಾಶಿವಗಡ ರಸ್ತೆ ಕಾಮಗಾರಿಯನ್ನು ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ದಯಾನಂದ ಮಠ ಇದ್ದರು. ಈ ಎರಡು ಕಾಮಗಾರಿಗಳ ಪರಿಶೀಲನಾ ಸಂದರ್ಭದಲ್ಲಿ ಗುಣಮಟ್ಟ ಮತ್ತು ಭರವಸೆ ಲೋಕೋಪಯೋಗಿ ಉಪ ವಿಭಾಗ ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ಜಂಗಮಶೆಟ್ಟಿ, ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next