Advertisement

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ: 13 ಮಂದಿಗೆ ಗಾಯ

10:21 AM Mar 09, 2020 | sudhir |

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹಾಗೂ ಮುಂದಿನ ಚಕ್ರ ಸ್ಪೊಟಗೊಂಡು ಸೇತುವೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ 13 ಮಂದಿಗೆ ಗಾಯಗಳಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

Advertisement

ಘಟನೆ ವಿವರ: ಬೆಂಗಳೂರು -ಹಿಂದುಪೂರು ರಸ್ತೆಯಲ್ಲಿರುವ ಕಲ್ಲೂಡಿ ಕ್ರಾಸ್ ಬಳಿ ಮುಳಬಾಗಿಲಿನ ತಾಯಲೂರು ಗ್ರಾಮದ ನಿವಾಸಿಗಳ ಕುಟುಂಬವೊಂದು ಶ್ರೀ ಕ್ಷೇತ್ರ ವಿದುರಾಶ್ವತ್ಥ ದೇವಾಲಯಕ್ಕೆ ಬರಲಿದ್ದು ಚಾಲಕ ಕಲ್ಲೂಡಿ ಬಳಿ ತಿರುವಿನ ಅರಿವು ಇಲ್ಲದ ಕಾರಣ ವೇಗವಾಗಿ ಬಂದ ಪರಿಣಾಮ ತಿರುವಿನಲ್ಲಿ ಮುಂದಿನ ಚಕ್ರ ಸ್ಪೊಟಗೊಂಡು ಕಾರು ಸೇತುವೆ 20 ಅಡಿ ಕೆಳಗೆ ಬಿದ್ದು ಸುಮಾರು 13 ಮಂದಿಗೆ ತೀವ್ರವಾಗಿ ಗಾಯಗಳಾಗಿ ಅದರಲ್ಲಿ ಎಂಟು ಮಂದಿಗೆ ಬೆಂಗಳೂರಿನ ನಿಮಾನ್ಸ್ ಅಸ್ಪೆತ್ರೆಗೆ ರವಾನಿಸಲಾಗಿದೆ.

ವೆಂಕಟೇಶ್.ಚಂದ್ರಪ್ಪ.ದೀನೇಶ್ ಪುಷ್ಪಮ್ಮ.ಯಶವಂತ್(6)ಸುಲೋಚನ (6) ವೆಂಕಟಸ್ವಾಮಿ (50) ನಾಗೇಶ್ (29) ಇವರನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.ಸ್ಥಳಕ್ಕೆ ವೃತ್ತ ನಿರೀಕ್ಷಕ ರವಿ ನಗರ ಠಾಣೆ ಪಿಎಸೈ.ಅವಿನಾಶ್ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next