Advertisement

ಸೌದಿಯಲ್ಲಿ ರಸ್ತೆ ಅಪಘಾತ: ಪಡುಬಿದ್ರಿಯ ಯುವಕ ಮೃತ್ಯು

12:23 PM Oct 18, 2019 | keerthan |

ಪಡುಬಿದ್ರಿ: ಸೌದಿ ಅರೇಬಿಯಾಯಲ್ಲಿ ನಡೆದ ಅಪಘಾತವೊಂದರಲ್ಲಿ ಪಡುಬಿದ್ರಿಯ ಯುವಕನೋರ್ವ ಮೃತಪಟ್ಟಿದ್ದಾನೆ

Advertisement

ಪಡುಬಿದ್ರಿಯ ಕಂಚಿನಡ್ಕ ನಿವಾಸಿ ಹಂಝರವರ ಪುತ್ರ ಅಬ್ದುಲ್ ಖಾದರ್ (35) ಎಂದು ಗುರುತಿಸಲಾಗಿದೆ. ಈತ ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಹೈಲ್‌ನ 180 ಕಿಮೀ ದೂರದಲ್ಲಿ ಸಂಚರಿಸುತಿದ್ದಾಗ ಟವರ್ ಸ್ಪೋಟಗೊಂಡು ಅಪಘಾತ ಸಂಭವಿಸಿತ್ತು. ತೀವ್ರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರು ತಂದೆ, ಪತ್ನಿ, ಎರಡು ಗಂಡು ಮಕ್ಕಳು, ಮೂವರು ಸಹೋದರರನ್ನು ಅಗಲಿದ್ದಾರೆ. ಅಬ್ದುಲ್ ಖಾದರ್ ಸೌದಿಯ ಜಿದ್ದಾದಲ್ಲಿ ಸ್ವಂತ ಉದ್ಯಮ ನಡೆಸುತಿದ್ದರು. ಖಾದರ್ ಜಿದ್ದಾದಲ್ಲಿ ನೆಲೆಸಿದ್ದು, ಹೈಲ್‌ಗೆ ವ್ಯಾಪಾರಕ್ಕಾಗಿ ತೆರಳುತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತದೇಹವನ್ನು ಸೌದಿಯಲ್ಲಿಯೇ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next