Advertisement

ಹಿರೇಹಳ್ಳಿ ಬಳಿ ಲಾರಿ -ಟಿಪ್ಪರ್ ಡಿಕ್ಕಿ: ಇಬ್ಬರ ಸಾವು

09:48 AM Nov 05, 2019 | keerthan |

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ‌ ಬಳಿ ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿ ಲಾರಿ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

Advertisement

ಬೆಳಗಿನಜಾವ ನಡೆದ ಅಪಘಾತದಲ್ಲಿ ಟಿಪ್ಪರ್ ಚಾಲಕ ಮೊಳಕಾಲ್ಮೂರು ತಾಲೂಕು ಬೊಮ್ಮಲಿಂಗನ ಹಳ್ಳಿಯ ಶಿವರಾಜ್(35) ಹಾಗೂ ಮಧ್ಯಪ್ರದೇಶದ ಲಾರಿ ಚಾಲಕ‌ ಸುರೇಂದ್ರ (50) ಅಪಘಾತದಲ್ಲಿ ಮೃತ ಪಟ್ಟವರು.

ಟಿಪ್ಪರ್ ನಲ್ಲಿದ್ದ ಇನ್ನೂ ಮೂರು ಜನ ಗಾಯಗೊಂಡಿದ್ದ‌ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next